ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಲ್ಲಿ ತಿರುವಳ್ಳುವರ್: ಆ.9ರಂದು ಕರುಣಾ ಉದ್ಘಾಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಲ್ಲಿ ತಿರುವಳ್ಳುವರ್: ಆ.9ರಂದು ಕರುಣಾ ಉದ್ಘಾಟನೆ
ತಮಿಳುನಾಡಿನ ವಿವಾದಾತ್ಮಕ ಹೊಗೇನಕಲ್ ಯೋಜನೆಯು ಕರ್ನಾಟಕ ಜೊತೆಗಿನ ಸಂಬಂಧಕ್ಕೆ ಯಾವುದೇ ಧಕ್ಕೆಯುಂಟು ಮಾಡದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮಿಳು ಸಂತ ತಿರುವಳ್ಳುವರ್ ಪ್ರತಿಮೆಯನ್ನು ಆಗಸ್ಟ್ 9ರಂದು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗುತ್ತದೆ, ಆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ತಮಿಳರ ಸುದೀರ್ಘ ಕಾಲದ ಬೇಡಿಕೆ ಇದಾಗಿತ್ತು. ಇದಕ್ಕೆ ಪೂರಕವಾಗಿ, ತಮಿಳುನಾಡು ಸರಕಾರವು ಕನ್ನಡದ ಕವಿ ಸರ್ವಜ್ಞನ ಪ್ರತಿಮೆಯನ್ನು ಆಗಸ್ಟ್ 13ರಂದು ಚೆನ್ನೈಯಲ್ಲಿ ಅನಾವರಣಗೊಳಿಸಲಿದ್ದು, ಆ ಕಾರ್ಯಕ್ರಮದಲ್ಲಿ ತಾನೂ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡುತ್ತಿದ್ದ ಅವರು, ಹೊಗೇನಕಲ್‌ನಲ್ಲಿ ತಮಿಳುನಾಡು ಸರಕಾರವು 1334 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ಕುರಿತಾಗಿ ಇರುವ ವಿವಾದವು ಉಭಯ ರಾಜ್ಯಗಳಿಗೂ ಸಮ್ಮತವಾಗುವ ರೀತಿಯಲ್ಲಿ ಪರಿಹಾರ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2012ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಮಿಳುನಾಡು ಘೋಷಿಸಿದ್ದರೆ, ಈ ಯೋಜನೆಗೆ ಕಾವೇರಿಯ ನೀರು ಬಳಕೆಯಾಗುವುದರಿಂದ ಇದನ್ನು ಕರ್ನಾಟಕ ವಿರೋಧಿಸುತ್ತಲೇ ಬಂದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸಕ-ಸಚಿವರ ಗಲಾಟೆ: ವರದಿ ಕೇಳಿದ ಡಿವಿ
ಯೂರಿಯಾ ಕೋರಿ ಕೇಂದ್ರಕ್ಕೆ ಪತ್ರ: ಯಡಿಯೂರಪ್ಪ
ಧರ್ಮುಗೆ ಕ್ಲೀನ್‌ಚಿಟ್ ನೀಡಿ ತೆರಳಿದ ಠಾಕೂರ್!
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಪುಟ್ಟೇಗೌಡ
ಮೈಸೂರು ಗಲಭೆ ಹಿಂದೆ ಸಂಘಪರಿವಾರ: ಎಚ್‌ಡಿಕೆ
ಬಿಜೆಪಿ ತೆಕ್ಕೆಗೆ ಬಿದ್ದ ಕೆಎಂಎಫ್