ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಲಭೆಗೆ ಸೇನೆ ಕಾರಣ;ಕೆಎಫ್‌ಡಿ ಕೈವಾಡವಿಲ್ಲ: ಸಿದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಲಭೆಗೆ ಸೇನೆ ಕಾರಣ;ಕೆಎಫ್‌ಡಿ ಕೈವಾಡವಿಲ್ಲ: ಸಿದ್ದು
ಪ್ರಮೋದ್ ಮುತಾಲಿಕ್ ಬಂಧನಕ್ಕೆ ಆಗ್ರಹ
NRB
ಮೈಸೂರು ಕೋಮುಗಲಭೆಯ ಹಿಂದೆ ಕೆಎಫ್‌ಡಿ, ಪಿಎಫ್‌ಐ ಸಂಘಟನೆಯ ಕೈವಾಡ ಇಲ್ಲ ಎಂದು ಪ್ರತಿಪಾದಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗಲಭೆಗೆ ಶ್ರೀರಾಮಸೇನೆ ಹಾಗೂ ಬಜರಂಗದಳವೇ ಕಾರಣ ಎಂದು ಆರೋಪಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮುಕ್ತಾಯಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುದಳ್ಳುರಿ ಪ್ರಕರಣ ಕುರಿತಂತೆ ಸಂಘ ಪರಿವಾರದ ವಿರುದ್ಧ ಕಿಡಿಕಾರಿದರು.

ಕೋಮುಗಲಭೆಯ ಹಿಂದೆ ಶ್ರೀರಾಮಸೇನೆ ಮತ್ತು ಬಜರಂಗದಳದ ಕೈವಾಡ ಇದೆ ಎಂದು ದೂರಿದರು. ಆ ನಿಟ್ಟಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಅಲ್ಲದೇ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೈಸೂರು ಗಲಭೆ ಹಿಂದೆ ಕೆಎಫ್‌ಡಿ ಮತ್ತು ಪಿಎಫ್‌ಐ ಇದೆ ಎಂದು ರಾಜಕೀಯ ಪ್ರೇರಿತವಾಗಿ ಆರೋಪಿಸಲಾಗುತ್ತಿದೆ. ಆ ಎರಡೂ ಸಂಘಟನೆಗಳು ಗಲಭೆಗೆ ಕಾರಣವಲ್ಲ ಎಂದು ಹೇಳಿದರು.

ಮೈಸೂರು ಗಲಭೆಗೆ ಸಂಘಪರಿವಾರವೇ ಕಾರಣ ಎಂದು ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಆರೋಪಿಸಿದ್ದರು. ಗಲಭೆ ಹಿಂದೆ ಕೆಎಫ್‌ಡಿ ಕೈವಾಡ ಇದ್ದು ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರು, ಸಂಘ ಪರಿವಾರದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗುಡುಗಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಮುಗಲಭೆ ಹಿಂದಿನ ಕಾರಣ ಹುಡುಕಿ: ಹೈಕೋರ್ಟ್
ಗಣಿಗಾರಿಕೆ: ಸರ್ಕಾರದ ವಿರುದ್ಧ ಲೋಕಾಯುಕ್ತ ಕಿಡಿ
ವಿನಿವಿಂಕ್ ಶಾಸ್ತ್ರೀಗೆ ಸುಪ್ರೀಂನಿಂದ ಜಾಮೀನು
ನಾಣಯ್ಯ ಹುಚ್ಚುಚ್ಚಾಗಿ ಮಾತಾಡ್ತಾರೆ ಅಂದ ರೆಡ್ಡಿ
ಡೆಲ್ಲಿ ಮೆಟ್ರೋ ಬೆಂ ಮೆಟ್ರೋ ಮೇಲೆ ಪರಿಣಾಮ ಬೀರದು
ಚರ್ಚ್ ದಾಳಿ: ಸರ್ಕಾರಕ್ಕೆ ಶೀಘ್ರವೇ ಮಧ್ಯಂತರ ವರದಿ