ಶೀತ ಅಥವಾ ಕೆಮ್ಮಿನ ಸಮಯದಲ್ಲಿ ನಾವು ಬೆಚ್ಚಗಿನ ಪಾನೀಯಗಳನ್ನು ಕುಡಿಯಬೇಕು. ಆದರೆ ಬರೀ ಬಿಸಿ ನೀರನ್ನು ಕುಡಿಯುವ ಬದಲು, ಅದರಲ್ಲಿ ಸ್ವಲ್ಪ ಶುಂಠಿ ಮತ್ತು ತುಳಸಿಯನ್ನು ಕುದಿಸಿ ಕುಡಿದರೆ ಅದು ಶೀತ ಕಫಗಳನ್ನು ದೂರ ಮಾಡುತ್ತದೆ. ಹಾಗೆಯೇ ತುಳಸಿ-ಶುಂಠಿ ಸೇರಿಸಿ ಚಹಾ ಕೂಡ ಶೀತವನ್ನು ಓಡಿಸಿ ಸುಲಭವಾಗಿ ಮೂಗಿನ ಮೂಲಕ ಉಸಿರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಸಣ್ಣ ಶುಂಠಿಯ ತುಂಡಿನ ಜೊತೆ ಅಗಿದು ತಿನ್ನುವುದರಿಂದ ಗಂಟಲಿನ ಸ್ನಾಯುಗಳು ಸಡಿಲಗೊಂಡು ಕೆಮ್ಮನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಖಾರ ಹಾಗು ಜೇನುತುಪ್ಪದ ಉಷ್ಣ ಗುಣ ಕಫವನ್ನು ಕರಗಿಸಲೂ ಸಲಾಯ ಮಾಡುತ್ತದೆ.
photo credit social media