ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಕೈಗೆ ಗಾಯವಾಗಿತ್ತು.
ಕೈಗೆ ಗಾಯವಾಗಿದ್ದರಿಂದ ಎಂದಿನಂತೆ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲು ಸಾಧ್ಯೋವಾಗಿರಲಿಲ್ಲ. ಆದರೆ ಸಂಕಷ್ಟಕ್ಕೀಡಾದಾಗ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.
ಕೈ ಗಾಯವಾದರೂ ಬ್ಯಾಂಡೇಜ್ ಕಟ್ಟಿಕೊಂಡು ರೋಹಿತ್ 28 ಎಸೆತಗಳಲ್ಲಿ 51 ರನ್ ಚಚ್ಚಿ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆದರು. ಆದರೆ ಪಂದ್ಯ ಗೆಲ್ಲಿಸಲಾಗದೇ ನಿರಾಸೆ ಅನುಭವಿಸಿದರು.