ಮಲೇಶಿಯದ ತೆರೆಂಗಣ್ಣು ರಾಜ್ಯದಲ್ಲಿ ಮೇರೆ ಮೀರುತ್ತಿರುವ ವಿಚ್ಛೇದನವನ್ನು ತಡೆದು ವಿವಾಹ ಸಂಬಂಧಗಳನ್ನು ಉಳಿಸಲು ಮಲೇಶಿಯ ಕಂಕಣಬದ್ಧವಾಗಿದೆ. ದೇಹದ ವಾಸನೆ, ಲೈಂಗಿಕತೆಯಲ್ಲಿ ನಿರುತ್ಸಾಹ ಮತ್ತು ಪತಿ, ಅಥವಾ ಪತ್ನಿ ಧರಿಸುವ ಪೈಜಾಮಾಗಳ ಬಗ್ಗೆ ಅಸಹನೆಯಿಂದ ಕೂಡ ದಂಪತಿ ನಡುವೆ ವಿಚ್ಛೇದನಕ್ಕೆ ಎಡೆಯಾಗುತ್ತಿದೆ.
ವಿಚ್ಛೇದನ ಪ್ರಮಾಣ ಏರುತ್ತಿರುವುದರ ಕಾರಣಗಳಲ್ಲಿ ಇವೂ ಸೇರಿದ್ದು, ದಂಪತಿ ನಡುವೆ ವಿಶೇಷವಾಗಿ ನವದಂಪತಿಗಳ ಲೈಂಗಿಕ ಸಂಬಂಧ ಸುಧಾರಣೆಗೆ ನೂತನ ವಿಧಾನಗಳನ್ನು ಸರ್ಕಾರ ಶೋಧಿಸುತ್ತಿದೆ.
ಲೈಂಗಿಕ ಅಪೇಕ್ಷೆಯನ್ನು ವರ್ಧಿಸುವ ವಿಲಕ್ಷಣ ಸುವಾಸನೆಗಳನ್ನು ಸೌಂಧರ್ಯವರ್ಧಕಗಳಿಗೆ ಪರಿಚಯಿಸಲು ಸೌಂದರ್ಯವರ್ಧಕ ಸಂಸ್ಥೆಗಳಿಗೆ ಆಹ್ವಾನಿಸಿರುವುದು ಸೇರಿದಂತೆ ಪತಿ, ಪತ್ನಿಯರ ಬಾಂಧವ್ಯ ವೃದ್ಧಿಗೆ ಒಟ್ಟಿಗೆ ಸ್ನಾನ ಮಾಡಬೇಕೆಂಬ ಸಲಹೆಯನ್ನು ಕೂಡ ಸರ್ಕಾರ ಮಂಡಿಸಿದ್ದಾಗಿ ವರದಿ ತಿಳಿಸಿದೆ.
ಈ ಕ್ರಮಗಳಿಂದ ದಂಪತಿಗಳಲ್ಲಿ ವಿಚ್ಛೇದನ ಪ್ರಮಾಣವನ್ನು ತಗ್ಗಿಸಬಹುದು ಎಂದು ರಾಜ್ಯ ಧಾರ್ಮಿಕ ಮತ್ತು ಮಾಹಿತಿ ಸಮಿತಿ ಉಪಾಧ್ಯಕ್ಷ ಮುಹಮದ್ ರಾಮ್ಲಿ ನುಹ್ ನಂಬಿದ್ದಾರೆ.