ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಬ್ಬ ಭಾರತೀಯ, ಇಬ್ಬರು ಶ್ರೀಲಂಕನ್ನರ ಶಿರಚ್ಛೇದ (Saudi Arabia | Indian | Lankans | Dubai)
Feedback Print Bookmark and Share
 
ನಾಲ್ಕು ವರ್ಷಗಳ ಹಿಂದೆ ಮನೆಯೊಂದನ್ನು ದರೋಡೆ ಮಾಡಿ, ಮಹಿಳೆಯೊಬ್ಬರ ಹತ್ಯೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಸೌದಿ ಅರೇಬಿಯದ ಜೆಡ್ಡಾದಲ್ಲಿ ಒಬ್ಬ ಭಾರತೀಯ ಮತ್ತು ಇಬ್ಬರು ಶ್ರೀಲಂಕಾ ಪೌರರ ಶಿರಚ್ಛೇದ ಮಾಡಲಾಗಿದೆ. ಮೊಹಮದ್ ನೌಶಾದ್ ಎಂಬ ಭಾರತೀಯ ಕೇರಳದ ಪಟ್ಟಾಂಬಿ ನಿವಾಸಿಯಾಗಿದ್ದ ಎಂದು ಭಾರತೀಯ ಕಾನ್ಸುಲೇಟ್ ಮ‌ೂಲಗಳು ತಿಳಿಸಿವೆ.

ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ, ಭಾರತೀಯ ಮತ್ತು ಇಬ್ಬರು ಶ್ರೀಲಂಕನ್ನರಾದ ಬಂದಾರ್ ನಿಕಾರ್ ಮತ್ತು ಹಲೀಮಾ ಅಬ್ಡೇಲ್‌ಕಾಡೆರ್ ಅವರಿಗೆ ತಲೆಕಡಿಯುವ ಶಿಕ್ಷೆ ವಿಧಿಸಲಾಯಿತೆಂದು ಅಧಿಕೃತ ಎಸ್‌ಪಿಎ ಏಜೆನ್ಸಿ ವರದಿಮಾಡಿದೆ.

ಕಳೆದ ನವೆಂಬರ್ 2005ರಲ್ಲಿ ಸುಮಾರು 12 ಮಂದಿಯ ಗ್ಯಾಂಗ್ ಮನೆಯೊಂದನ್ನು ದರೋಡೆ ಮಾಡಿ ಸೌದಿ ಮಹಿಳೆಯನ್ನು ಹತ್ಯೆಮಾಡಿದ್ದರು. 2007ರ ಜೂನ್‌ನಲ್ಲಿ ಶಿರಚ್ಛೇದದ ತೀರ್ಪು ನೀಡಲಾಗಿದೆಯೆಂದು ಕಾನ್ಸುಲೇಟ್ ಮ‌ೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ