ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಸಮರದಲ್ಲಿ ವಿಜಯಿಯಾಗಿ ಹೊರಹೊಮ್ಮುತ್ತದೆ ಮತ್ತು ದೇಶದಲ್ಲಿ ಯಾವುದೇ ಬೆಲೆ ತೆತ್ತಾದರೂ ಶಾಂತಿ ಮರುಸ್ಥಾಪನೆ ಮಾಡುವುದಾಗಿ ಸೇನಾ ಮುಖ್ಯಸ್ಥ ಜನರಲ್ ಅಸ್ಫಕ್ ಪರ್ವೇಜ್ ಕಯಾನಿ ಬುಧವಾರ ತಿಳಿಸಿದ್ದಾರೆ.
ಉಗ್ರರ ವಿರುದ್ಧ ಹೋರಾಡುವ ಭದ್ರತಾ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿ, ಭಯೋತ್ಪಾದನೆ ಬಲಿಪಶುಗಳ ಬಂಧುಗಳಿಗೆ ಸಾಂತ್ವನ ಹೇಳಲು ಆತ್ಮಾಹುತಿ ದಾಳಿಗಳು ಮತ್ತು ಬಾಂಬ್ ದಾಳಿಗಳಿಗೆ ಗುರಿಯಾದ ವಾಯವ್ಯ ನಗರಕ್ಕೆ ಕಯಾನಿ ಭೇಟಿ ನೀಡಿದ್ದರು.
ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ದೇಶವು ವಿಜಯಿಯಾಗಿ ಹೊರಹೊಮ್ಮುತ್ತದೆ ಮತ್ತು ಪೇಶಾವರ ಮತ್ತು ಪಾಕಿಸ್ತಾನದ ಉಳಿದ ಕಡೆ ಯಾವುದೇ ಬೆಲೆ ತೆತ್ತಾದರೂ ಶಾಂತಿ ಮರುಸ್ಥಾಪನೆ ಮಾಡುತ್ತೇವೆಂದು ಸಭೆಯೊಂದರಲ್ಲಿ ತಿಳಿಸಿದರು. ಭಯೋತ್ಪಾದನೆ ವಿರುದ್ದ ಹೋರಾಟದಲ್ಲಿ ಪೊಲೀಸರಿಗೆ ಗೌರವ ಸಲ್ಲಿಸಲು ಪೋಲೀಸ್ ಲೈನ್ಸ್ನಲ್ಲಿ ಸೇರಿದ್ದ ಸಬೆಯಲ್ಲಿ ಅವರು ಮಾತನಾಡುತ್ತಿದ್ದರು.