ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೆನ್ನೈ ಮೂಲದ ವೆಂಕಟರಮಣಗೆ ನೊಬೆಲ್ ಕಿರೀಟ (Nobel Prize | Chemistry | Stockholm | Ramakrishnan | Tamil Nadu)
Bookmark and Share Feedback Print
 
ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ತಮಿಳುನಾಡು ಮೂಲದ ವೆಂಕಟರಮಣ ರಾಮಕೃಷ್ಣನ್ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ಸ್ಟಾಕ್‌ಹೋಮ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವೆಂಕಟರಮಣ ಅವರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ, ಇಕಾನಾಮಿಕ್ಸ್, ಭೌತಶಾಸ್ತ್ರ ಮತ್ತು ಮೆಡಿಸಿನ್ ವಿಭಾಗಗಳಲ್ಲಿಯೂ ಸ್ವೀಡಿಸ್ ಕಿಂಗ್ ಗುಸ್ಟಾಫ್ ಅವರಿಂದ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಲ್ಲದೆ, ಈ ಸಾಲಿನಲ್ಲಿ ಐದು ಮಂದಿ ಮಹಿಳೆಯರೂ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು.

1952ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ವೆಂಕಟರಮಣ ಅವರು ಜನಿಸಿದ್ದರು. ಹಿರಿಯ ವಿಜ್ಞಾನಿ ಆಗಿದ್ದಾರೆ. ರಾಮಕೃಷ್ಣ ಅವರೊಂದಿಗೆ ಅಮೆರಿಕದ ಥೋಮಸ್ ಇ ಸ್ಟೇಟಿಜ್ ಮತ್ತು ಇಸ್ರೇಲ್‌ನ ಅಡಾ ಇ ಯೋನಾಥ್ ನೊಬೆಲ್ ಪ್ರಶಸ್ತಿಯನ್ನು ಹಂಚಿಕೆಯೊಂದಿಗೆ ಪಡೆದಿದ್ದರು.

ತಮಿಳುನಾಡು ಮೂಲದ ರಾಮಕೃಷ್ಣನ್ ಅವರು 1971ರಲ್ಲಿ ಬರೋಡಾ ಯೂನಿರ್ವಸಿಟಿಯಿಂದ ಬಿಎಸ್ಸಿ ಪದವಿ ಪಡೆದಿದ್ದರು. ನಂತರ 1976ರಲ್ಲಿ ಓಹಿಯೋ ಯೂನಿರ್ವಸಿಟಿಯಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ