ರಕ್ಷಣಾ ಸೆಕ್ರಟರಿ ಆದೇಶ:ಶರಣಾದ ಎಲ್ಟಿಟಿಇ ಮುಖಂಡರ ಹತ್ಯೆ!
ಕೊಲಂಬೊ, ಸೋಮವಾರ, 14 ಡಿಸೆಂಬರ್ 2009( 15:19 IST )
ಶ್ರೀಲಂಕಾ ಮಿಲಿಟರಿ ಪಡೆ ಶರಣಾದ ಎಲ್ಟಿಟಿಇಯ ಮೂರು ಮಂದಿ ಮುಖಂಡರನ್ನು ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿಯವರ ಆದೇಶದ ಮೇರೆಗೆ ಹತ್ಯೆಗೈದಿರುವುದಾಗಿ ಲಂಕಾ ಮಿಲಿಟರಿಯ ಮಾಜಿ ಜನರಲ್ ಸರತ್ ಫೋನ್ಸೆಕಾ ಗಂಭೀರವಾಗಿ ಆರೋಪಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಫೋನ್ಸೆಕಾ 'ದಿ ಸಂಡೆ ವೀಕ್ಲಿ'ಗೆ ನೀಡಿರುವ ಸಂದರ್ಶನದಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. ಲಂಕಾ ಮಿಲಿಟರಿ ಪಡೆಗೆ ಶರಣಾದ ಮೂರು ಮಂದಿ ಎಲ್ಟಿಟಿಇ ಮುಖಂಡರನ್ನು ಲಂಕಾ ಅಧ್ಯಕ್ಷ ರಾಜಪಕ್ಸೆ ಸಹೋದರರು ಹಾಗೂ ರಕ್ಷಣಾ ಕಾರ್ಯದರ್ಶಿಯಾಗಿರುವ ಗೋಟಬಯಾ ಅವರು ಹತ್ಯೆಗೈಯಲು ಆದೇಶ ನೀಡಿರುವುದಾಗಿ ಹೇಳಿದ್ದಾರೆ.
2009ರಲ್ಲಿ ಎಲ್ಟಿಟಿಇ ವಿರುದ್ಧ ಶ್ರೀಲಂಕಾ ಮಿಲಿಟರಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹತನಾಗುವ ಮೂಲಕ ಎಲ್ಟಿಟಿಇ ಹೋರಾಟ ಅಂತ್ಯಗೊಂಡಿತ್ತು. ತದನಂತರ ಲಂಕಾ ಮಿಲಿಟರಿಗೆ ಶರಣಾದ ಪ್ರಮುಖ ಎಲ್ಟಿಟಿಇ ನಾಯಕರನ್ನು ಹತ್ಯೆಗೈಯಲು ಗೋಟಬಯಾ ಆದೇಶ ನೀಡಿದ್ದರೆಂದು ಆರೋಪಿಸಿದ್ದಾರೆ.