ಇಸ್ಲಾಮಾಬಾದ್ , ಶುಕ್ರವಾರ, 25 ಡಿಸೆಂಬರ್ 2009( 15:55 IST )
ಜಾಗತಿಕ ಸಮುದಾಯದ ಮುಂದೆ ಕಾಶ್ಮಿರ ಸಮಸ್ಯೆ ಇತ್ಯರ್ಥಕ್ಕಾಗಿ ಭಾರತ ಪ್ರಯತ್ನಿಸುತ್ತಿದೆ ಎನ್ನುವುದನ್ನು ತೋರಿಸಿಕೊಳ್ಳಲು ಜಮ್ಮು ಕಾಶ್ಮಿರದಿಂದ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಭಾರತ ನಿರ್ಧಾರ ತಂತ್ರವಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಜಮ್ಮು ಕಾಶ್ಮಿರದಿಂದ 30 ಸಾವಿರ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಭಾರತದ ನಿರ್ಧಾರದ ಕುರಿತಂತೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ವಕ್ತಾರ ಅಬ್ದುಲ್ ಬಾಸಿತ್ , ಕಾಶ್ಮಿರ ಅತಿ ಹೆಚ್ಚಿನ ಸೇನಾಪಡೆಗಳನ್ನು ಹೊಂದಿರುವ ಪ್ರದೇಶವಾಗಿದೆ ಎಂದು ಹೇಳಿದ್ದಾರೆ.
ಇಂತಹ ತಂತ್ರಗಳಿಂದ ಕಾಶ್ಮಿರ ಸಮಸ್ಯೆಯಿಂದ ಜಾಗತಿಕ ಸಮುದಾಯದ ಗಮನವನ್ನು ಇತರೆಡೆಗೆ ಸೆಳೆಯಲು ಸಾಧ್ಯವಿಲ್ಲ.ಕಾಶ್ಮಿರಿಗಳ ಇಚ್ಚೆಯಂತೆ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದ್ದಾರೆ.