ವಿದೇಶಿ ಶಕ್ತಿಗಳು ನನ್ನ ಹತ್ಯೆಗೆ ಸಂಚು ನಡೆಸುತ್ತಿವೆ ಎಂದು ನೇಪಾಳದ ವಿರೋಧ ಪಕ್ಷದ ಮಾವೋವಾದಿ ನಾಯಕ ಪ್ರಚಂಡ ಅವರು ಯಾವುದೇ ದೇಶದ ಹೆಸರು ಹೇಳದೆ ಆರೋಪಿಸಿದ್ದಾರೆ.
ಹಾಂಗ್-ಕಾಂಗ್ಗೆ ದಿಢೀರನೆ ಭೇಟಿ ನೀಡಿ ನೇಪಾಳಕ್ಕೆ ವಾಪಸ್ಸಾದ ನಂತರ, ತನಗೆ ಜೀವಬೆದರಿಕೆ ಇರುವುದಾಗಿ ಆರೋಪಿಸಿದ ಅವರು, ತಾವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಾಗಿ ಶಪಥ ಮಾಡಿದ್ದಾರೆ.
ಅಲ್ಲದೇ 2001ರ ಜೂನ್ನಲ್ಲಿ ದೊರೆ ಬೀರೇಂದ್ರ ಅವರ ಹತ್ಯೆ ನಡೆಯುವ ಒಂದು ತಿಂಗಳ ಮೊದಲು ಇಡೀ ಕುಟುಂಬದ ಜೊತೆ ರಾಯಲ್ ಅರಮನೆಯಲ್ಲಿ ದೇಶದ ಸ್ವಾತಂತ್ರ್ಯ ಕುರಿತು ಆರಂಭಿಕ ಮಾತುಕತೆ ನಡೆಸಿರುವುದಾಗಿಯೂ ಹೇಳಿದರು.
ದೊರೆ ಬೀರೇಂದ್ರ ಅವರ ಜೊತೆ ನೇರವಾಗಿ ಮಾತುಕತೆ ನಡೆಸಲು ಪ್ರಯತ್ನಿಸಲಾಗಿತ್ತು. ನಂತರ ದೇಶದ ಪ್ರಥಮ ಅಧ್ಯಕ್ಷರಾಗುವಂತೆ ಅವರನ್ನು ಕೋರಿಕೊಂಡಾಗ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ದೊರೆ ಸೇರಿದಂತೆ ಇಡೀ ಕುಟುಂಬವನ್ನು ಹತ್ಯೆಗೈಯಲಾಯಿತು ಎಂದು ಹೇಳಿದರು.