ಪ್ರಭಾಕರನ್ ತಾಯಿ ಭಾರತಕ್ಕೆ ಮರಳಲು ಸ್ವತಂತ್ರರು: ಶ್ರೀಲಂಕಾ
ಕೊಲಂಬೊ, ಮಂಗಳವಾರ, 12 ಜನವರಿ 2010( 15:31 IST )
ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ತಾಯಿ ಹಾಗೂ ಅತ್ತೆ ಭಾರತಕ್ಕೆ ತೆರಳಲು ಮುಕ್ತವಾಗಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ ತಿಳಿಸಿದ್ದಾರೆ.
ಪ್ರಭಾಕರನ್ ತಾಯಿ ಹಾಗೂ ಅತ್ತೆ ತಾಯ್ನಾಡಿಗೆ ಮರಳಲು ಭಾರತ ಒಪ್ಪಿದಲ್ಲಿ ಅವರು ಅಲ್ಲಿಗೆ ಹೋಗಲು ಸ್ವತಂತ್ರರು ಎಂದು ಇಲ್ಲಿಗೆ ಆಗಮಿಸಿದ್ದ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಪ್ರಭಾಕರನ್ ತಾಯಿ ಪಾರ್ವತಿ ಪಿಳ್ಳೈ ಹಾಗೂ ಅತ್ತೆ ಎರಂಬು ಅವರು ತಮ್ಮ ಮುಂದಿನ ಯೋಜನೆಯ ಬಗ್ಗೆ ಈವರೆಗೂ ಸಾರ್ವಜನಿಕವಾಗಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ ಎಂಡಿಎಂಕೆ ವರಿಷ್ಠ ವೈಕೋ ಮತ್ತು ಮಾಜಿ ಟೈಗರ್ ವರಿಷ್ಠ ಸಹೋದರ ರಾಜೇಂದ್ರನ್ ಅವರು, ಪ್ರಭಾಕರನ್ ತಾಯಿ ಪಾರ್ವತಿ ಅವರನ್ನು ತಮಿಳುನಾಡಿಗೆ ಕಳುಹಿಸುವಂತೆ ಲಂಕಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.