ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾಯಲು ಸಿದ್ಧರಾಗಿ: ಉಗ್ರರಿಗೆ ಪಾಕಿಸ್ತಾನ ಪ್ರಧಾನಿ ಎಚ್ಚರಿಕೆ (Pakistan | Yousuf Raza Gilani | terrorists | Islam)
Bookmark and Share Feedback Print
 
ಭಯೋತ್ಪಾದನೆಯ ದುಷ್ಟಮಾರ್ಗವನ್ನು ತ್ಯಜಿಸಿ ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯವಾಗದಿದ್ದರೆ ಸಾಯಲು ಸಿದ್ಧರಾಗಿ ಎಂದು ಉಗ್ರರಿಗೆ ಪಾಕಿಸ್ತಾನ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಎಚ್ಚರಿಕೆ ರವಾನಿಸಿದ್ದಾರೆ.

ಆಡಳಿತ ಪಕ್ಷ 'ಪಾಕಿಸ್ತಾನ ಪ್ಯೂಪಲ್ಸ್ ಪಾರ್ಟಿ'ಯ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸ್ವಾತ್ ಕಣಿವೆ ಮತ್ತು ಮಾಲಕಾಂಡ್ ಪ್ರಾಂತ್ಯಗಳಲ್ಲಿ ಸೈನ್ಯವು ಭಯೋತ್ಪಾದಕರನ್ನು ಬಗ್ಗು ಬಡಿದಿದೆ; ದೇಶದ ಉಳಿದ ಎಲ್ಲಾ ಕಡೆಯೂ ಶೀಘ್ರದಲ್ಲೇ ಅವರನ್ನು ಸೇನೆ ನಾಶ ಮಾಡಲಿದೆ ಎಂದು ಭವಿಷ್ಯ ನುಡಿದರು.

ಸರಕಾರವು ಭಯೋತ್ಪಾದನೆಯ ವಿಚಾರವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದು. ಇದು ಕೇವಲ ನಮ್ಮ ಅಸ್ತಿತ್ವದ ಪ್ರಶ್ನೆ ಮಾತ್ರವಲ್ಲ, ಜತೆಗೆ ಮುಂಬರುವ ಪೀಳಿಗೆಯ ಅಸ್ತಿತ್ವದ ವಿಚಾರವೂ ಹೌದು ಎಂದು ಗಿಲಾನಿ ಹೇಳಿದರು.

ಯಾವ ದೇಶದ ವಿರುದ್ಧ ಹೋರಾಡಬೇಕು ಎಂದೂ ತಿಳಿಯದ ಭಯೋತ್ಪಾದಕರು ಇಸ್ಲಾಂ ಮತ್ತು ಮಾನವೀಯತೆಯ ವಿರೋಧಿಗಳು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ಶಸ್ತ್ರಾಸ್ತ್ರ ಪಡೆಗಳು ಭಯೋತ್ಪಾದಕರ ಬೆನ್ನೆಲುಬನ್ನು ಮುರಿದಿವೆ. ಹಾಗಾಗಿ ಅವರೀಗ ಅಡಗುದಾಣಗಳಿಂದ ಹೊರಗೆ ಓಡುತ್ತಿದ್ದಾರೆ. ಜತೆಗೆ ನಗರಗಳಲ್ಲಿನ ಅಮಾಯಕ ಜನರನ್ನು ಗುರಿ ಮಾಡಿಕೊಂಡಿದ್ದಾರೆ ಎಂದರು.

ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರುಗಳೂ ಶಂಕಿತರ ಮತ್ತು ದುಷ್ಟಕೂಟಗಳತ್ತ ಕಣ್ಣಿಡಬೇಕು ಮತ್ತು ತನಿಖಾ ದಳಗಳಿಗೆ ಸಹಕಾರ ನೀಡಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಭಯೋತ್ಪಾದನೆ ಮತ್ತು ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ತನ್ನ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪೂರಕ ಕ್ರಮಗಳನ್ನು ಕೈಗೊಂಡಿದೆ. ಶೀಘ್ರದಲ್ಲೇ ನಾವು ಹೆಚ್ಚಿನ ಪ್ರಗತಿಯನ್ನು ಕಾಣಲಿದ್ದೇವೆ ಎಂದು ಗಿಲಾನಿ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ