ಶ್ರೀಲಂಕಾದ ಉತ್ತರ ಮತ್ತು ಪೂರ್ವಭಾಗದಲ್ಲಿ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ ಸಮುದಾಯದ ಜನರಿಗೆ ಸಾಲ ನೀಡಿಕೆ ಮತ್ತು ಆರ್ಥಿಕ ವಹಿವಾಟಿನ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ 'ಈಳಂ ಬ್ಯಾಂಕ್ಸ್'ನ್ನು ತೆರೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಶ್ರೀಲಂಕಾ ಭಾಗದಲ್ಲಿ ಎಲ್ಟಿಟಿಇ ಸುಮಾರು 11ಬ್ಯಾಂಕ್ಗಳ ಶಾಖೆಯನ್ನು ಹೊಂದಿದ್ದು, ಅದು ತಮಿಳು ಜನರಿಗೆ ಸಾಲ ಸೇರಿದಂತೆ ಉತ್ತಮವಾದ ಸೇವೆಯನ್ನು ನೀಡುತ್ತಿತ್ತು ಎಂದು ವಿವರಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ನಡೆಸಿದ ಅಂತಿಮ ಸಮರಲ್ಲಿ ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹತನಾಗುವುದರೊಂದಿಗೆ ಎಲ್ಟಿಟಿಇ ಪಡೆ ನಾಮಾವಶೇಷಗೊಂಡಿತ್ತು.
ಎಲ್ಟಿಟಿಇ ತನ್ನ ಈಳಂ ಬ್ಯಾಂಕ್ನ ಶಾಖೆಗಳನ್ನು ಪೂರ್ವ ಮತ್ತು ಉತ್ತರದ ವಾನ್ನಿ ಪ್ರದೇಶದಲ್ಲಿ ನಡೆಸುತ್ತಿತ್ತು ಎಂದು ಪೊಲೀಸ್ ತನಿಖಾ ವರದಿ ತಿಳಿಸಿದೆ. 2007ರ ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಲಂಕಾದ ಪೂರ್ವ ಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಎಲ್ಟಿಟಿಇ ಬಟ್ಟಿಕಾಲೋವಾದ ಕೋಟ್ಟಿಚೋಲೈನಲ್ಲಿ 3ಶಾಖೆ, ಸಾಂಪುರದ ಟ್ರೈನ್ಮಲೈನಲ್ಲಿ 3 ಹಾಗೂ ವಾನ್ನಿಯಲ್ಲಿ ಐದು ಶಾಖೆಗಳನ್ನು ಹೊಂದಿತ್ತು.