ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯಾರಿಗೂ ರಾಜಕುಮಾರಿ ಡಯಾನಾರನ್ನು ಕೊಲ್ಲುವ ಉದ್ದೇಶವಿರಲಿಲ್ಲ (Princess Diana | Dodi al Fayed | Michael Mansfield | Princess of Wales)
Bookmark and Share Feedback Print
 
ಗೆಳೆಯ ದೋಡಿ ಅಲ್ ಫಾಯೆದ್‌ನನ್ನು ವೇಲ್ಸ್ ರಾಜಕುಮಾರಿ ಡಯಾನಾ ತ್ಯಜಿಸಬೇಕು ಮತ್ತು ಆಕೆ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಕೈ ಬಿಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಹೆದರಿಸಲು ಮಾಡಿದ್ದ ಯತ್ನ ಮಾರಣಾಂತಿಕವಾಗಿ ಪರಿಣಮಿಸಿ ಆಕೆ 1997ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಬೇಕಾಯಿತು ಎಂದು ಬ್ರಿಟೀಷ್ ವಕೀಲ ಮೈಕೆಲ್ ಮ್ಯಾನ್ಸ್‌ಫೀಲ್ಡ್ ಹೇಳಿದ್ದಾರೆ.

ಡಯಾನಾ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಡಿಯ ತಂದೆ ಮೊಹಮ್ಮದ್ ಅಲ್ ಪಾಯೆದ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಮ್ಯಾನ್‌ಫೀಲ್ಡ್, ರಾಜಕುಮಾರಿಯನ್ನು ಕೊಲ್ಲುವ ಉದ್ದೇಶ ಯಾರಿಗೂ ಇರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕುಮಾರಿಯನ್ನು ಬೆದರಿಸಲು ಹಾಕಿದ್ದ ಯೋಜನೆ ತಪ್ಪಿ 1997ರ ಆಗಸ್ಟ್ 31ರ ಕರಾಳ ಘಟನೆಯಾಗಿ ಪರಿಣಮಿಸಿತ್ತು ಎಂದು ಮ್ಯಾನ್ಸ್‌ಫೀಲ್ಡ್ ಹೇಳಿದ್ದಾರೆಂದು 'ಡೈಲೀ ಮೇಲ್' ವರದಿ ಮಾಡಿದೆ.

ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಇದಕ್ಕೂ ಕೆಲವು ಸಮಯದ ಮುಂಚೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಂದ ಡಯಾನಾ ವಿಚ್ಛೇದನ ಪಡೆದಿದ್ದರು.

ಅಕೆಯನ್ನು ಯಾರಾದರೂ ಸಾವಿನಲ್ಲಿ ನೋಡಲು ಬಯಸಿದ್ದರೆಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ಪ್ರಕಾರ ದೋಡಿಯ ಜತೆಗಿನ ಆಕೆಯ ಸಂಬಂಧವನ್ನು ಕೊನೆಗೊಳಿಸಿ, ಆಕೆಯ ಜೀವನವನ್ನು ಬದಲಾಯಿಸುವ ಮತ್ತು ಆಕೆಯ ಇತರ ಚಟುವಟಿಕೆಗಳನ್ನು ತಡೆಯಲು ಯತ್ನಿಸುವ ಯೋಜನೆಯಿತ್ತು. ಆದರೆ ಈ ಯೋಜನೆ ತೀರಾ ಕೆಟ್ಟದಾಗಿ ಪರಿಣಿಸಿ ಆಕೆಯ ಸಾವಿನೊಂದಿಗೆ ಅಂತ್ಯವಾಯಿತು ಎಂದು ಮ್ಯಾನ್‌ಫೀಲ್ಡ್ ವಿವರಿಸಿದ್ದಾರೆ.

ಕ್ಯಾಟಲನ್ (ಸ್ಪೇನ್) ಪತ್ರಿಕೆ 'ಎಲ್ ಪಿರಿಯಾಡಿಕೋ'ದಲ್ಲಿ ಇಂದು ಪ್ರಕಟವಾಗಿರುವ ಸಂದರ್ಶನದಲ್ಲಿ ಮ್ಯಾನ್‌ಫೀಲ್ಡ್ ಮಾತನಾಡಿದ್ದು, ಡಯಾನಾರವರ ಖಾಸಗಿ ಮತ್ತು ಸಾರ್ವಜನಿಕ ಜೀವನದ ಹಲವು ದೃಷ್ಟಿಕೋನಗಳನ್ನು ಬ್ರಿಟೀಷ್ ಮೂಲಗಳು ವಿರೋಧಿಸಿದ್ದವು ಎಂದು ಹೇಳಿದ್ದಾರೆ.

ನನಗೆ ತಿಳಿದ ಪ್ರಕಾರ ರಾಜಕುಮಾರಿ ಡಯಾನಾ ಮತ್ತು ದೋಡಿ ಅಲ್ ಫಾಯೆದ್ ನಡುವಿನ ಸಂಬಂಧವು ಬ್ರಿಟೀಷ್ ಮೂಲಗಳಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಮಕ್ಕಳು ಮತ್ತು ಆಸ್ಪತ್ರೆಗಳ ಪರ ಸಾಕಷ್ಟು ಕೆಲಸ ಮಾಡಿದ ಹೊರತಾಗಿಯೂ ಮೊಹಮ್ಮದ್ ಅಲ್ ಫಾಯೆದ್ ಅವರಿಗೆ ಬ್ರಿಟನ್‌ನಲ್ಲಿ ಸ್ವಾಗತವಿರಲಿಲ್ಲ ಎಂದು ಮ್ಯಾನ್‌ಫೀಲ್ಡ್ ವಿವರಣೆ ನೀಡಿದ್ದಾರೆ.

ಡಯಾನಾ ಕುರಿತು ಹೇಳುವುದಾದರೆ, ಆಕೆಯನ್ನು ರಾಜ ಮನೆತನವು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಳು; ಆದರೆ ನನ್ನ ಪ್ರಕಾರ ಡಯಾನಾ ಭೂ ಗಣಿಗಾರಿಕೆ ವಿರುದ್ಧದ ಕಾರ್ಯಕ್ರಮಗಳಲ್ಲಿ ಆಕೆ ತನ್ನನ್ನು ತಾನು ತೊಡಗಿಸಿಕೊಂಡದ್ದು ಸಂಬಂಧಪಟ್ಟವರಿಗೆ ತೀವ್ರ ಕಿರಿಕಿರಿ, ಸಿಟ್ಟಿಗೆ ಕಾಣವಾಗಿತ್ತು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ