ಉತ್ತರ ಶ್ರೀಲಂಕಾದಲ್ಲಿರುವ ಇರಾನಾಮಡು ವಿಮಾನ ನಿಲ್ದಾಣದವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.
ಒಂದು ಕಾಲದಲ್ಲಿ ತಮಿಳು ಉಗ್ರರ ಭಧ್ರಕೋಟೆಯಾಗಿದ್ದ ಇರಾನಾಮಡುವಿನಲ್ಲಿ, ತಮಿಳು ಉಗ್ರರು ವಿಮಾನ ನಿಲ್ದಾಣ ನಿರ್ಮಿಸಿ, ಸೇನಾಪಡೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿತ್ತು ಎಂದು ಸೇನಾವಕ್ತಾರರು ತಿಳಿಸಿದ್ದಾರೆ.
ಉತ್ತರ ಶ್ರೀಲಂಕಾದ ದಟ್ಟ ಅರಣ್ಯದಲ್ಲಿ ಎಲ್ಟಿಟಿಇ ಉಗ್ರರು ವಿಮಾನ್ ರನ್ ವೇ ಹಾಗೂ ನಿಯಂತ್ರಣ ಕೊಠಡಿಯನ್ನು ನಿರ್ಮಿಸಿದ್ದು, ಸರಕಾರ ಪುನ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದ್ದು, ವಿಮಾನ ನಿಲ್ದಾಣವನ್ನು ನಾಗರಿಕರ ಸೇವೆಗಾಗಿ ಬಳಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜನೆವರಿ 16 ರಂದು, ಲಂಕಾದ ಸೇನಾಪಡೆಗಳು ಇರಾನಮಡುವಿನಿಂದ ಸ್ವಲ್ಪ ದೂರದಲ್ಲಿ ವಿಮಾನದ ರನ್ವೇಯನ್ನು ಪತ್ತೆ ಮಾಡಿದ್ದರು ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.