ಯುನೈಟೆಡ್ ನೇಷನ್ಸ್, ಮಂಗಳವಾರ, 15 ಜೂನ್ 2010( 17:32 IST )
ಕಿರ್ಗಿಸ್ತಾನದಲ್ಲಿನ ಜನಾಂಗೀಯ ಹಿಂಸಾಚಾರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದ್ದು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಮೂಲಕ ಶಾಂತಿಯನ್ನು ಕಾಪಾಡಬೇಕೆಂದು ಸಲಹೆ ನೀಡಿದೆ.
ಕಿರ್ಗಿಸ್ತಾನದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ದೇಶದಲ್ಲಿ ಅಶಾಂತಿ ವಾತಾವರಣ ಮೂಡಿದ್ದು, ಜನರು ಭೀತಿಯಿಂದ ಕಾಲಕಳೆಯುವಂತಾಗಿದೆ. ಕೂಡಲೇ ಕಾನೂನು ಸುವ್ಯವಸ್ಥೆ ಮೂಲಕ ಶಾಂತಿ ಮರುಕಳಿಸುವಂತೆ ಸರ್ಕಾರ ಮುಂದಾಗಬೇಕೆಂದು ವಿಶ್ವಸಂಸ್ಥೆಯ ಮೆಕ್ಸಿಕೋ ರಾಯಭಾರಿ ಕ್ಲೌಡೆ ಹೆಲ್ಲೆರ್ ತಿಳಿಸಿದ್ದಾರೆ.
ಉಜ್ಬೇಕಿ ಮತ್ತು ತಜಕಿ ಜನಾಂಗಗಳ ನಡುವಿನ ಘರ್ಷಣೆಯಿಂದಾಗಿ ದೇಶದ ಜನರು ಆತಂಕದಲ್ಲಿ ಇರುವಂತಾಗಿದ್ದು, ಆ ನಿಟ್ಟಿನಲ್ಲಿ ಕಿರ್ಗಿಸ್ತಾನ ಉಭಯ ಕೋಮುಗಳ ನಡುವೆ ಮಾತುಕತೆ ನಡೆಸಿ ವಿವಾದ ಬಗೆಹರಿಸಲು ಕೋರಿದೆ.