ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾವು ಅಥವಾ ವಿಚಾರಣೆ: ಗಡಾಫಿಗೆ ಅಂತಿಮ ಗಡುವು (Muammar Gaddafi, Libyan leader,Latest News in Kannada)
ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ ತನ್ನ ತವರೂರಾದ ಸಿರ್ಟೆಯ ಹೊರ ಭಾಗದಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಬಂಡುಕೋರರ ನೇತೃತ್ವದ ಮಧ್ಯಂತರ ಸರಕಾರ ಹೇಳಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಿರ್ಟೆ ನಗರದ ದಕ್ಷಿಣಕ್ಕೆ ಕೆಲವು ಕಿಲೋಮಿಟರ್‌ಗಳ ದೂರದಲ್ಲಿ ಇರುವ ಮುಅಮ್ಮರ್‌ ಗಡಾಫಿ ನಿರಂತರವಾಗಿ ಸ್ಥಳವನ್ನು ಬದಲಾಯಿಸುತ್ತಾ ಓಡಾಡುತ್ತಿದ್ದಾರೆ ಎಂದು ಅನೀಸ್‌ ಶರೀಫ್‌ ತಿಳಿಸಿದ್ದಾರೆ.

ಮುಅಮ್ಮರ್‌ ಗಡಾಫಿ ತನ್ನ ನಿಷ್ಠರು ಹೆಚ್ಚಾಗಿರುವ ಸಭಾ ನಗರದಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಶರೀಫ್‌ ಹೇಳಿದ್ದಾರೆ.

ಮುಅಮ್ಮರ್‌ ಗಡಾಫಿಗೆ ಶರಣಾಗಲು ನೀಡಿರುವ ಗಡುವಿನಲ್ಲಿ ಕೆಲವೇ ಸಮಯ ಬಾಕಿ ಉಳಿದಿದ್ದು, ಸಾವು, ಆತ್ಮಹತ್ಯೆ ಅಥವಾ ವಿಚಾರಣೆಯನ್ನು ಮುಅಮ್ಮರ್‌ ಗಡಾಫಿ ಅವರೇ ನಿರ್ಧರಿಸಬೇಕು ಎಂದು ಶರೀಫ್‌ ತಿಳಿಸಿದ್ದಾರೆ.

ಸಿಟ್ರೆ, ಸಭಾ ಹಾಗೂ ಬನಿವಾಲಿದ್‌ ಪಟ್ಟಣದಿಂದ ಹೊರಹೋಗಲು ಮುಅಮ್ಮರ್‌ ಗಡಾಫಿ ನಿಷ್ಠರಿಗೆ ಒಂದು ವಾರ ಕಾಲಾವಕಾಶ ನೀಡಿದ್ದು, ಈ ಗಡುವು ಸೆಪ್ಟೆಂಬರ್‌ 10ಕ್ಕೆ ಅಂತ್ಯಗೊಳ್ಳಲಿದೆ ಎಂದು ಬಂಡುಕೋರರ ಪಡೆಯ ಮುಖ್ಯಸ್ಥ ಮುಸ್ತಫಾ ಅಬ್ಡೆಲ್‌ ಜಲೀಲ್‌ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಲಿಬಿಯಾ ಅಧ್ಯಕ್ಷ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ