ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಳ್ಳಲು ಬಯಸುವುದಾಗಿ ಹೇಳಿದ್ದ ಕಸಬ್, ಬಳಿಕ ಇದಕ್ಕೆ ಉಲ್ಟಾ ಹೇಳಿಕೆ ನೀಡಿದ್ದಾನೆ.
ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದ ಕಸಬ್ಗೆ, ನ್ಯಾಯಾಧೀಶರು ಆತನ ವಕೀಲರೊಂದಿಗೆ ಚರ್ಚಿಸಲು ಹೇಳಿದ್ದರು. ತನ್ನ ವಕೀಲರೊಂದಿಗೆ ಮಾತನಾಡಿದ ಬಳಿಕ ಕಸಬ್ ತಪ್ಪೊಪ್ಪಿಕೊಳ್ಳುವುದಿಲ್ಲ ಅಂದಿದ್ದ. ಮತ್ತೆ ಆಗಲೇ ತಪ್ಪೊಪ್ಪಿಕೊಳ್ಳುವುದಾಗಿ ಯಾಕೆ ಹೇಳಿದೆ ಎಂಬ ನ್ಯಾಯಾಧೀಶರ ಪ್ರಶ್ನೆಗೆ 'ಸುಮ್ಮನೆ' ಎಂಬ ಉತ್ತರ ನೀಡಿದ.
ಕಸಬ್ ಪರ ವಕೀಲರಾಗಿರುವ ಅಬ್ಬಾಸ್ ಖಾಜ್ಮಿ, "ತಪ್ಪೊಪ್ಪಿಕೊಂಡಲ್ಲಿ ವಿಚಾರಣೆ ಬೇಗ ಮುಗಿಯುತ್ತದೆ ಎಂಬುದಾಗಿ ಭಾವಿಸಿದ್ದ ಕಸಬ್ ತಪ್ಪೊಪ್ಪಿಕ್ಕೊಳಲು ಮುಂದಾಗಿದ್ದ. ಆದರೆ ಇನ್ನೂ ಇಬ್ಬರ ವಿಚಾರಣೆ ಬಳಿಕವೇ ತೀರ್ಪು ಹೊರಬೀಳಲಿದೆ ಎಂಬುದಾಗಿ ಆತನಿಗೆ ತಿಳಿಹೇಳಿದ ಬಳಿಕ ಆತ ಮನಸ್ಸು ಬದಲಾಯಿಸಿದ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.