ತಾಲ್ಲೂಕಿನಲ್ಲಿ ಮೂರನೇ ಹಂತದಲ್ಲಿ ಅನುಷ್ಠಾನಗೊಂಡ ಪಾಲಾರ್ ಎಡದಂಡೆ ಸುಜಲ ಉಪ ಜಲಾನಯನದ ಯಶಸ್ವಿ ಅನುಷ್ಠಾನಕ್ಕಾಗಿ ಪಾಲಾರ್ ಎಡದಂಡೆ ಜಲಾನಯನಕ್ಕೆ ಎರಡನೇ ಬಾರಿ ರಾಷ್ಟ್ರೀಯ ಉತ್ಪಾದಕ ಪ್ರಶಸ್ತಿ- 2009 ದೊರೆತಿದೆ. ನವದೆಹಲಿಯಲ್ಲಿ ಸೆ.24 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಜಲಾನಯನ ಇಲಾಖೆಯು ಈ ಪ್ರಶಸ್ತಿಯನ್ನು ಪಡೆಯಲಿದೆ.