ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಬ್ಳಿ, ಯುವಿ ತಂದೆ, ರಾಷ್ಟ್ರಪತಿ ಪುತ್ರ ಏನಾದ್ರು? (Assembly Elections 2009 | Maharashtra | Arunachal Pradesh | Haryana | Election Result)
ಮಹಾರಾಷ್ಟ್ರ, ಹರ್ಯಾಣ ಮತ್ತು ಅರುಣಾಚಲ ಪ್ರದೇಶಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳ ಫಲಿತಾಂಶಗಳು ಗುರುವಾರ ಹೊರಬಿದ್ದಿದ್ದು, ಮೂರೂ ರಾಜ್ಯಗಳಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ಅಧಿಕಾರ ಉಳಿಸಿಕೊಂಡಿದೆ. ಈ ಚುನಾವಣೆ ಫಲಿತಾಂಶದ ಕೆಲವು ಮುಖ್ಯಾಂಶಗಳು:
* ವಿಧಾನಸಭೆ ಪ್ರತಿಪಕ್ಷ ನಾಯಕ, ಶಿವಸೇನೆಯ ರಾಮದಾಸ್ ಕದಮ್ಗೆ ಗುಹಾಗರ್ ಕ್ಷೇತ್ರದಲ್ಲಿ ಸೋಲು
* ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಭೋಕಾರ್ ಕ್ಷೇತ್ರದಿಂದ ವಿಜಯ
* ಸ್ಫೋಟದಿಂದ ವಿವಾದಕ್ಕೀಡಾಗಿದ್ದ ಮಾಲೆಗಾಂವ್ನಲ್ಲಿ ಜನ ಸುರಾಜ್ಯ ಪಾರ್ಟಿ ಮೂಲಕ ಸ್ಪರ್ಧಿಸಿದ್ದ ಮುಸ್ಲಿಂ ಮತ ಪಂಡಿತ ಮೌಲಾನಾ ಮುಫ್ತಿ ಇಸ್ಮಾಯಿಲ್ ವಿಜಯ
* ಪ್ರತಿಪಕ್ಷಗಳ ಮತ ವಿಭಜನೆಯಿಂದ ಕಾಂಗ್ರೆಸಿಗೆ ಲಾಭ: ಬಿಜೆಪಿ ಹೇಳಿಕೆ
* ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣೀತಿಗೆ ಸೋಲಾಪುರ ಕ್ಷೇತ್ರದಲ್ಲಿ ವಿಜಯ
* ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದಾಗಿ ನಮಗೆ ಸೋಲು: ಬಿಜೆಪಿ
* ಎಂಎನ್ಎಸ್ ನಮಗೆ ಬಲವಾದ ಹೊಡೆತ ನೀಡಿದೆ: ಎನ್ಸಿಪಿ
* ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಗೆ ಕುದಾಲ್ ಕ್ಷೇತ್ರದಲ್ಲಿ ಜಯ
* ಅಮರಾವತಿ ಕ್ಷೇತ್ರದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ರಾವ್ ಸಾಹೇಬ್ ಶೇಖಾವತ್ಗೆ ಪ್ರಯಾಸದ ಗೆಲುವು. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ದೇಶಮುಖ್ ಸೋಲು
* ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್ಗೆ ಘಾಟ್ಕೊಪರ್ ಪಶ್ಚಿಮ ಕ್ಷೇತ್ರದಲ್ಲಿ ಎಂಎನ್ಎಸ್ನ ರಾಮ್ ಕದಮ್ ಎದುರು ಸೋಲು.
* ಎನ್ಸಿಪಿ ನಾಯಕ ಛಗನ್ ಭುಜಬಲ್ ಪುತ್ರಿ ಪಂಕಜಾ ಭುಜಬಲ್ ಗೆಲುವು
* ಮಹಾರಾಷ್ಟ್ರದಲ್ಲಿ ಐವರು ಕನ್ನಡಿಗರು ವಿಜಯ ಸಾಧಿಸಿದ್ದಾರೆ. ಅವರೆಂದರೆ: ಕೃಷ್ಣ ಹೆಗಡೆ (ವಿಲೇಪಾರ್ಲೆ ಕ್ಷೇತ್ರ, ಕಾಂಗ್ರೆಸ್), ಸುರೇಶ್ ಶೆಟ್ಟಿ (ಅಂಧೇರಿ ಪೂರ್ವ, ಕಾಂಗ್ರೆಸ್), ಗೋಪಾಲ ಶೆಟ್ಟಿ (ಬೋರಿವಿಲಿ ಕ್ಷೇತ್ರ, ಬಿಜೆಪಿ), ಜಗನ್ನಾಥ ಶೆಟ್ಟಿ (ಸಯನ್ ಕೋಳಿವಾಡ ಕ್ಷೇತ್ರ, ಕಾಂಗ್ರೆಸ್ ) ಮತ್ತು ಗಿಲ್ಬರ್ಟ್ ಮೆಂಡೋನ್ಸಾ (ಮೀರಾ ಭಯಂದರ್ ಕ್ಷೇತ್ರ, ಎನ್ಸಿಪಿ).
* ಸರಕಾರ ಕೋರಿದಲ್ಲಿ ಬೆಂಬಲ ನೀಡಲು ಸಿದ್ಧ: ಎಂಎನ್ಎಸ್ ಪ್ರತಿಕ್ರಿಯೆ
* ಹರ್ಯಾಣದ ಪಂಚಕುಳದಲ್ಲಿ ಐಎನ್ಎಲ್ಡಿಯಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ಗೆ ಸೋಲು
* ಹರ್ಯಾಣದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಸಿದ್ದರೂ ಅಧಿಕಾರ ಉಳಿಸಿಕೊಂಡಿದೆಯಾದರೂ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಫೂಲ್ಚಂದ್ ಮುಲ್ಲಾನಾ ಅವರು ಅಂಬಾಲ ಕ್ಷೇತ್ರದಲ್ಲಿ ಐಎನ್ಎಲ್ಡಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.
* ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ
* ಹರ್ಯಾಣದಲ್ಲಿ ಹ್ಯಾಟ್ರಿಕ್ ಬಾರಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್