ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೀಘ್ರವೇ ರಾಜಕೀಯದಿಂದ ನಿವೃತ್ತಿಯಾಗ್ತೇನೆ: ಕರುಣಾನಿಧಿ (Karunanidhi | Tamilnadu | DMK | Chennai | Politics)
Bookmark and Share Feedback Print
 
PTI
ತಮಿಳುನಾಡು ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಂ.ಕರುಣಾನಿಧಿ ಅವರು ಶೀಘ್ರದಲ್ಲೇ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಸ್ವತಃ ಘೋಷಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ಆರುಂಧತಿಯಾರ್ ಸಮುದಾಯದ ರಾಲಿಯಲ್ಲಿ ಪಾಲ್ಗೊಂಡಿದ್ದ ಅವರು, 2010ರ ಮಧ್ಯದ ವೇಳೆಗೆ ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿರುವುದಾಗಿ ಹೇಳಿದರು. ಸುದೀರ್ಘ ರಾಜಕಾರಣ, ಆರೋಗ್ಯ ಸಮಸ್ಯೆ ತನಗೆ ತೊಂದರೆ ನೀಡುತ್ತಿರುವುದರಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿದರು.

ಜೂನ್ ತಿಂಗಳಿನಲ್ಲಿ ಕೊಯಮತ್ತೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಶಾಸ್ತ್ರೀಯ ತಮಿಳು ಸಮ್ಮೇಳನ ಯಶಸ್ವಿಗೊಳಿಸುವುದು ನನ್ನ ಹೆಬ್ಬಯಕೆ. ನಂತರ ಜನರ ಪ್ರಮುಖ ಆಶೋತ್ತರಗಳನ್ನು ಈಡೇರಿಸಲು ಹೆಚ್ಚಿನ ಸಮಯವನ್ನು ಮೀಸಲಿರುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ