ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ನಿರಪರಾಧಿ ಎಂದು ಸಾಬೀತುಪಡಿಸ್ತೇನೆ: ದಿನಕರನ್ (Dinakaran | High court | Supreme court | UPA | Tamil nadu)
Bookmark and Share Feedback Print
 
NRB
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪಿ.ಡಿ.ದಿನಕರನ್ ಅವರ ಮೇಲೆ ಹೊರಿಸುತ್ತಿರುವ ಆರೋಪಗಳ ಉದ್ದೇಶ ಏನೆಂದು ಪ್ರಶ್ನಿಸಿದ್ದು, ತಾವು ನಿರಪರಾಧಿ ಎಂದು ಸಾಬೀತುಪಡಿಸುವುದಾಗಿ ಭಾನುವಾರ ತಿಳಿಸಿದ್ದಾರೆ.

ಅಕ್ರಮ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ದಿನಕರನ್ ತಮ್ಮ ಮುಖ್ಯ ನ್ಯಾಯಾಧೀಶ ಸ್ಥಾನವು ಈ ಅಪಪ್ರಚಾರದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಸಲು ಕಟ್ಟಿಹಾಕುತ್ತಿದೆ. ಆದರೆ ಸತ್ಯವನ್ನು ಯಾರಿಗೂ ಮರೆ ಮಾಚಲು ಸಾಧ್ಯವಿಲ್ಲ ಎಂದಿರುವ ಅವರು, ಸತ್ಯ ಏನೆಂದು ಕೊನೆಗೂ ತಿಳಿಯಲಿದೆ ಎಂದು ಹೇಳಿದರು.

ನನಗೆ ನಾನು ಮುಗ್ದ ಎಂದು ತೋರಿಸಿ ಕೊಡುವ ಅಗತ್ಯವಿಲ್ಲ. ಒಂದು ದಿನ ಜನರಿಗೇ ನಾನು ನಿರಪರಾಧಿ ಮತ್ತು ಒಳ್ಳೆಯ ಹೃದಯವಂತ ಎಂದು ತಿಳಿಯುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಶುಕ್ರವಾರ ದಿನಕರನ್‌ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೀಡಿರುವ ಬಡ್ಡಿಯನ್ನು ಕಾನೂನು ಸಚಿವಾಲಯ ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಸಮಿತಿಗೆ ಸೂಚಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ