ಅಲ್ಪಸಂಖ್ಯಾತರ ಮೀಸಲಾತಿ ಕುರಿತು ನೇಮಿಸಲಾಗಿರುವ ರಂಗನಾಥ್ ಮಿಶ್ರಾ ಸಮಿತಿ ವರದಿಯನ್ನು ಈ ಅಧಿವೇಶನದಲ್ಲಿಯೇ ಮಂಡಿಸಲಾಗುವುದು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
"ನಾವು ಈ ವರದಿಯನ್ನು ಸದನದಲ್ಲಿ ಈ ಅಧಿವೇಶನದಲ್ಲಿಯೇ ಮಂಡಿಸಲಿದ್ದೇವೆ" ಎಂಬುದಾಗಿ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ನುಡಿದರು.
ಈ ವರದಿಯನ್ನು ಶೀಘ್ರವೇ ಮಂಡಿಸಬೇಕು ಎಂಬುದಾಗಿ ಸಮಾಜವಾದಿ ಪಕ್ಷದ ಸದಸ್ಯರು ಮುಲಾಯಂ ಸಿಂಗ್ ನೇತೃತ್ವದಲ್ಲಿ ಒತ್ತಾಯಿಸಿದಾಗ ಪ್ರಧಾನಿಯವರ ಈ ಭರವಸೆ ಹೊರಬಿದ್ದಿದೆ.
ಈ ವಿಚಾರವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಎತ್ತಿದ ವಿಪಕ್ಷದ ಸದಸ್ಯರು, ಈ ವರದಿಯು ಮಾಹಿತಿ ಹಕ್ಕು ಕಾಯ್ದೆಯನ್ವಯ ಮುಕ್ತವಾಗಿ ಲಭಿಸುತ್ತಿದ್ದು, ಸರ್ಕಾರವು ಇದನ್ನು ಶೀಘ್ರವೇ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದರು.