ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಠಾಕ್ರೆ ಲೇವಡಿಯ ವಸ್ತುವಾಗಿದ್ದಾರೆ: ಸಚಿನ್ ಪೈಲಟ್ (Shah Rukh Khan | Mumbaikars | Shiv Sena | Sachin Pilot | Thackeray)
Bookmark and Share Feedback Print
 
ಶಿವಸೇನಾ ಬೆದರಿಕೆಯ ಮಧ್ಯೆಯು ಶಾರುಕ್ ಖಾನ್ ಅವರ 'ಮೈ ನೇಮ್ ಇಸ್ ಖಾನ್' ಚಿತ್ರವನ್ನು ಬೆಂಬಲಿಸಿದ ಮುಂಬೈ ಜನತೆಯನ್ನು ಅಭಿನಂದಿಸಿದ ಕೇಂದ್ರ ಸಚಿವ ಸಚಿನ್ ಪೈಲಟ್‌, ಇಂತಹ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ಠಾಕ್ರೆ ಲೇವಡಿಯ ವಸ್ತುವಾಗಿದ್ದಾರೆ ಎಂದು ಹೇಳಿದ್ದಾರೆ.

ಮುಂಬೈನ ಜನತೆ ಶಿವಸೇನೆಯ ಬೆದರಿಕೆಗೆ ಬಗ್ಗದೆ ಶಾರುಕ್ ಅವರನ್ನು ಬೆಂಬಲಿಸಿ, ಠಾಕ್ರೆ ನಿಲುವು ದೋಷಪೂರಿತವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಶಿವಸೇನೆಯ ಇಂತಹ ಪೊಳ್ಳು ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎನ್ನುವುದನ್ನು ಕೂಡಾ ತೋರಿಸಿಕೊಟ್ಟಿದ್ದಾರೆ ಎಂದು ಸಚಿನ್ ಪೈಲಟ್ ತಿಳಿಸಿದ್ದಾರೆ.

'ದೋಹಾ ಡಿಬೇಟ್ಸ್ ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಸಚಿನ್ ಪೈಲಟ್, ರಾಜಕೀಯ ಮತ್ತು ಕ್ರೀಡೆಯನ್ನು ಎಂದಿಗೂ ಜೋಡಿಸಬಾರದು ಎಂದು ಹೇಳಿದ್ದಾರೆ.

ಶಿವಸೇನೆ ಖಾರುಕ್‌ಖಾನ್‌ರನ್ನು ದೇಶದ್ರೋಹಿ ಎಂದು ಕರೆದಾಗ ರಾಜಕೀಯ ಪಕ್ಷಗಳು ಮೌನವಹಿಸಲು ಕಾರಣವೇನು ಎಂದು ಪ್ರಶ್ನಿಸಿದಾಗ, ಸರಕಾರ ಹಿಂಸಾಚಾರದಲ್ಲಿ ತೊಡಗಿದ ಅನೇಕ ಶಿವಸೈನಿಕರನ್ನು ಬಂಧಿಸಿದೆ ಎಂದು ಸಚಿನ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ