ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆಕ್ಸ್ ಕಾಂಡ: ಮೈಮರೆತಿದ್ದ ಸ್ವಾಮೀಜಿಗೆ ಮತ್ತು ಬರಿಸಲಾಗಿತ್ತೇ? (Nithyananda Swamiji | Sex Scandal | Bidadi | Dhyana Peetha)
Bookmark and Share Feedback Print
 
32ರ ಹರೆಯದ ನಿತ್ಯಾನಂದ ಸ್ವಾಮೀಜಿ ಅಲಿಯಾಸ್ ರಾಜಶೇಖರನ್ ಕಾಮಕಾಂಡ ಬಯಲಾಗಿರುವ ಹಿನ್ನೆಲೆಯಲ್ಲಿ, ಇದೆಲ್ಲವೂ ಒಳಸಂಚು, ಸ್ವಾಮೀಜಿಗೆ ಮತ್ತು ಬರಿಸಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬುದು ಕೆಲವರ ಅಂಬೋಣ. ಈ ಬಗ್ಗೆ, ಗುರುವಾರ ಬೆಂಗಳೂರಿನ ಬಿಡದಿಯಲ್ಲಿರುವ ಧ್ಯಾನಪೀಠ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹಂಪಿ ಸರ್ವಜ್ಞ ಪೀಠದ ಮುಖ್ಯಸ್ಥರು ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಈ ಮಧ್ಯೆ, ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.

ಬಿಡದಿ ಆಶ್ರಮಕ್ಕೆ ಗುರುವಾರ ಸ್ವಇಚ್ಛೆಯಿಂದ ಭೇಟಿ ನೀಡಿದ ಅವರು, ತಾವೇನೂ ಸ್ವಾಮೀಜಿಯನ್ನು ಬೆಂಬಲಿಸಲು ಬಂದಿಲ್ಲ. ತನ್ನ ಭೇಟಿಗೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಆದರೆ ಸನ್ಯಾಸಿಗಳ ಮೇಲೆ ಬಂದಿರುವ ಈ ಅಪವಾದದ ಸತ್ಯಾಸತ್ಯತೆ ಪರಿಶೀಲಿಸಲು ಬಂದಿರುವುದಾಗಿ ಅವರು ನುಡಿದರು.

ಈ ವೀಡಿಯೋ ತುಣುಕುಗಳನ್ನು ನೋಡಿದಾಗಲೇ ಅವರಿಗೆ ಯಾವುದೋ ಮತ್ತು ಬರುವ ಔಷಧಿ ನೀಡಿರುವುದು ತಿಳಿಯುತ್ತದೆ. ಸ್ವಾಮೀಜಿಯ ಮುಖದಲ್ಲಿ ಎಂದಿದ್ದ ಆ ಒಂದು ಕಳೆಯಿರಲಿಲ್ಲ. ಮಹಿಳೆಯೊಬ್ಬಾಕೆ ಮಾತ್ರೆ ಕೊಡುವುದು, ನಂತರ ಬಾಟಲಿಯಲ್ಲಿ ಏನೋ ಸುರಿಯುವುದು... ಇವುಗಳನ್ನು ನೋಡಿದರೆ, ಇದು ಸ್ವಾಮೀಜಿ ಹೆಸರು ಕೆಡಿಸುವ, ಪೂರ್ವ ಯೋಜಿತ ಸಂಚು. ಮತ್ತು ಬರುವ ಔಷಧಿ ನೀಡಿ, ಅವರ ಜ್ಞಾನ ತಪ್ಪಿಸಿ ಈ ಕೃತ್ಯ ಎಸಗಲಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಯಾರು ಕೂಡ ತಿಳಿಯಬಹುದಾಗಿದೆ. ಇಡೀ ದೃಶ್ಯಾವಳಿಯಲ್ಲಿ ಅವರು ಮೈಮರೆತಂತಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ನುಡಿದರು.

ಸ್ವಾಮೀಜಿ ಎಲ್ಲಿ?: ದೇಶದ ಎಲ್ಲ ಚಾನೆಲ್‌ಗಳಲ್ಲಿ ಪ್ರಸಾರವಾಗಿ ಎರಡು ದಿನಗಳೇ ಕಳೆದರೂ ಸ್ವಾಮೀಜಿ ಎಲ್ಲಿದ್ದಾರೆಂಬ ಖಚಿತ ಮಾಹಿತಿ ಯಾರಿಗೂ ಇಲ್ಲ. ಕೆಲವು ಊಹಾಪೋಹಗಳು, ಸ್ವಾಮೀಜಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು, ಆತ ಮೈಸೂರಿನ ಲಾಡ್ಜ್ ಒಂದರಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಆದರೆ ಬಿಡದಿ ಮಠದ ಕಿರಿಯ ಸ್ವಾಮೀಜಿ ಸಚ್ಚಿದಾನಂದ ಅವರು ಹೇಳುವಂತೆ, ನಿತ್ಯಾನಂದ ಹರಿದ್ವಾರದಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಸ್ಪಷ್ಟಪಡಿಸಲಿದ್ದಾರೆ. ಸ್ವಾಮೀಜಿ ಕಾಣಿಸಿಕೊಳ್ಳುವವರಿಗೆ ಈ ಕುರಿತು ಊಹಾಪೋಹಗಳು ಜಾರಿಯಲ್ಲಿರುತ್ತವೆ.

ಮತ್ತು ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಆತನ ವಿರುದ್ಧ ಕೇಸು ದಾಖಲಿಸಲಾಗಿದ್ದು, ಉಭಯ ರಾಜ್ಯಗಳ ಪೊಲೀಸರೂ ಸ್ವಾಮೀಜಿಗಾಗಿ ಶೋಧ ಕಾರ್ಯದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ