ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗರ್ಭಿಣಿ ಪ್ರೇಯಸಿಯನ್ನು ಶೌಚಾಲಯದಲ್ಲಿ ಕೊಂದ ಪ್ರಿಯಕರ! (Lover murders | pregnant girlfriend | Pallavi | Mohammed Shamim)
Bookmark and Share Feedback Print
 
ಹಲವು ಪ್ರೇಮಗಳಂತೆ ಇದು ಕೂಡ 'ಪ್ರೀತಿಗೆ ಕಣ್ಣಿಲ್ಲ' ಎಂಬ ಸಂದೇಶವನ್ನು ಹೊತ್ತು ದುಃಖಾಂತ್ಯಗೊಂಡ ಕಥಾನಕ. ಆತ ಒಂದು ಮಗುವಿನ ತಂದೆ, ಈಕೆ ಚಿರ ಯೌವನೆ. ದುರ್ಬಲ ಕ್ಷಣಗಳಿಗೆ ಬಲಿಯಾಗಿ ಗರ್ಣಿಣಿಯಾಗಿದ್ದವಳನ್ನು ಸಾರ್ವಜನಿಕ ಶೌಚಾಲಯದಲ್ಲಿ ಕತ್ತು ಹಿಸುಕಿ ಕೊಲ್ಲುವುದರೊಂದಿಗೆ ಪ್ರೇಮವು ಪರ್ಯಾವಸಾನಗೊಂಡಿದೆ.

ಈ ಪ್ರಕರಣ ನಡೆದಿರುವುದು ನಾಗ್ಪುರದಲ್ಲಿ. 20ರ ಹರೆಯದ ಪಲ್ಲವಿ ಕೊಲೆಯಾದವಳು. ಹಂತಕನ ಹೆಸರು 25ರ ಹರೆಯದ ಮೊಹಮ್ಮದ್ ಶಮೀಮ್ ಯಾನೆ ಶಮ್ಮಿ. ಕಳೆದೆರಡು ವರ್ಷಗಳಿಂದ ಇವರ ನಡುವೆ ಪ್ರೇಮ ವ್ಯವಹಾರ ನಡೆಯುತ್ತಿತ್ತು.

ಮೊದಲ ಪಿಯುಸಿ ಓದುತ್ತಿದ್ದ ಪಲ್ಲವಿ ಕಾರ್ಪೆಂಟರ್ ಆಗಿದ್ದ ಶಮೀಮ್‌ನನ್ನು ಬಹುವಾಗಿ ಪ್ರೀತಿಸುತ್ತಿದ್ದಳು. ಕಳೆದೆರಡು ವರ್ಷಗಳಿಂದ ನಡೆದು ಬಂದ ಪ್ರೀತಿ ಮಿತಿ ಮೀರಿದಾಗ ಒಂದು ಬಾರಿ ಗರ್ಭಪಾತವೂ ನಡೆದು ಹೋಗಿತ್ತು. ಈಗ ಮತ್ತೊಮ್ಮೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನಾಲ್ಕು ತಿಂಗಳು ತುಂಬಿರುವ ಹೊಟ್ಟೆಯನ್ನು ತೊಳೆಸಿಕೊಂಡು ಬಿಡು ಎಂಬ ಪ್ರಿಯಕರನ ಮಾತಿಗೆ ಪಲ್ಲವಿ ಜಗ್ಗಿರಲಿಲ್ಲ. ಪರಿಣಾಮ ಕೊಲೆ ನಡೆದು ಹೋಗಿದೆ.

ಮತ್ತೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒಂಬತ್ತು ತಿಂಗಳ ಮಗಳನ್ನು ಹೊಂದಿರುವ ಶಮೀಮ್ ತನ್ನ ಪ್ರೇಯಸಿಯ ಮೇಲೆ ಒತ್ತಡ ಹೇರುತ್ತಿದ್ದ. ಆದರೆ ಆಕೆ ಹಣಕ್ಕಾಗಿ ಬೇಡಿಕೆ ಮುಂದಿಟ್ಟಿದ್ದಳು. ಅಲ್ಲದೆ ತನ್ನನ್ನು ಮದುವೆಯಾಗು ಎಂದು ಆತನ ಮುಂದೆ ದುಂಬಾಲು ಬಿದ್ದಿದ್ದಳು. ಈ ಸಂಬಂಧ ಅವರೊಳಗೆ ಜಗಳವೂ ನಡೆದಿದೆ. ಯಾವುದಕ್ಕೂ ಪಲ್ಲವಿ ಮಣಿದಿರಲಿಲ್ಲ. ಇವರಿಬ್ಬರ ಪ್ರೇಮ ವ್ಯವಹಾರ ಶಮೀಮ್ ಪತ್ನಿಗೂ ತಿಳಿದಿತ್ತು ಮತ್ತು ಆಕೆ ಇದರ ಬಗ್ಗೆ ತನ್ನ ಗಂಡನಲ್ಲಿ ಕೂಡ ಜಗಳ ತೆಗೆಯುತ್ತಿದ್ದಳು ಎಂದು ಮೂಲಗಳು ಹೇಳಿವೆ.

ರಿಜ್ವಾನಾ ಪರ್ವೀನ್ ಎಂಬಾಕೆಯನ್ನು ಮೂರು ವರ್ಷಗಳ ಹಿಂದೆಯೇ ಮದುವೆಯಾಗಿರುವ ಶಮೀಮ್‌, ಶನಿವಾರ ರಾತ್ರಿ 10 ಗಂಟೆ ಹೊತ್ತಿಗೆ ಪಲ್ಲವಿ ಸಹೋದರಿ ರಿಂಕು ಎಂಬಾಕೆಗೆ ಫೋನ್ ಮಾಡಿದ್ದ. 'ಮನೆಯ ಹೊರಗಿದ್ದೇನೆ, ಪಲ್ಲವಿಯನ್ನು ಕಳುಹಿಸು' ಎಂದು ಆದೇಶ ನೀಡಿದ್ದ.

ಈ ಹೊತ್ತಿನಲ್ಲಿ ಬೇರೆ ಕೆಲಸದಲ್ಲಿ ವ್ಯಸ್ತರಾಗಿದ್ದ ಮನೆಯವರು ಆಕೆಯನ್ನು ಹೆಚ್ಚಾಗಿ ಗಮನಿಸಿರಲಿಲ್ಲ. ಆದರೆ ತಡರಾತ್ರಿಯಾದರೂ ಪಲ್ಲವಿ ಮರಳದೇ ಇದ್ದಾಗ ಆತಂಕಗೊಂಡಿದ್ದರು. ಬೆಳಿಗ್ಗೆ ಹುಡುಕಾಟ ನಡೆಸಬಹುದು ಎಂಬ ಯೋಚನೆಯಲ್ಲಿ ಮನೆಯವರು ಪೊಲೀಸ್ ದೂರು ನೀಡಿರಲಿಲ್ಲ.

ಬೆಳಿಗ್ಗೆ ಪಕ್ಕದ ಮನೆಯ ಹೆಂಗಸರು ಟಾಯ್ಲೆಟ್‌ಗೆಂದು ಹೋದಾಗ ಅಲ್ಲಿ ಪಲ್ಲವಿಯ ಶವ ಅಂಗಾತ ಬಿದ್ದುಕೊಂಡಿತ್ತು. ಅರೆ ಬೆತ್ತಲೆ ಸ್ಥಿತಿಯಲ್ಲಿದ್ದ ಪಲ್ಲವಿ ಶವದ ಕತ್ತಿನಲ್ಲಿ ಆಕೆಯದ್ದೇ ಚೂಡಿದಾರ ವೇಲ್ ಇತ್ತು. ಅದನ್ನೇ ಬಳಸಿ ಶಮೀಮ್ ಪಲ್ಲವಿಯನ್ನು ಸಾಯಿಸಿದ್ದ. ಸಾಯಿಸುವುದಕ್ಕೂ ಮೊದಲು ಪಲ್ಲವಿಯ ಜತೆ ದೈಹಿಕ ಸಂಪರ್ಕ ನಡೆಸಿದ್ದ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.

ಇದ್ದ ಮೂವರು ಮಕ್ಕಳಲ್ಲಿ ಒಬ್ಬನನ್ನು ಅನಾರೋಗ್ಯದ ಕಾರಣ ಕೇವಲ ಐದು ವಾರಗಳ ಹಿಂದಷ್ಟೇ ಪಲ್ಲವಿಯ ಹೆತ್ತವರಾದ ಯೋಗೇಶ್ವರ್-ಶಾರದಾ ಕಳೆದುಕೊಂಡಿದ್ದರು. 28ರ ಹರೆಯದ ದೊಡ್ಡ ಮಗ ಪ್ರತೀಕ್ ಅಂತ್ಯಸಂಸ್ಕಾರ ಮುಗಿಯುವ ಹೊತ್ತಿಗೆ ಎರಗಿರುವ ಮತ್ತೊಂದು ಸಾವು ಕುಟುಂಬಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಅದೂ ಅಪಮಾನಕಾರಿ ಸಾವು.
ಸಂಬಂಧಿತ ಮಾಹಿತಿ ಹುಡುಕಿ