ಕೋಪಗೊಂಡಿದ್ದ ತರೂರ್
ನವದೆಹಲಿ: ಯುಪಿಎ ಸರಕಾರದ ಸಚಿವ ಫಾರೂಕ್ ಅಬ್ದುಲ್ಲಾ ಅವರ ಜತೆ ಪತ್ರಕರ್ತ ಕರಣ್ ಥಾಪರ್ ನಡೆಸಿದ ಸಂದರ್ಶನ ಪ್ರಸಾರವಾದ ನಂತರ ಪತ್ರಕರ್ತನ ಮೇಲೆ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿದ್ದ ಶಶಿ ತರೂರ್ ಹರಿ ಹಾಯ್ದಿರುವ ಘಟನೆ ವರದಿಯಾಗಿದೆ. ಆದರೆ ನಂತರ ತನ್ನ ತಪ್ಪಿನ ಅರಿವಾಗಿ ಥಾಪರ್ ಅವರಲ್ಲಿ ತರೂರ್ ಕ್ಷಮೆ ಯಾಚಿಸಿದ್ದಾರೆ. ಇದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ನಡೆದಿರುವ ಪ್ರಸಂಗ.