ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಮಾನ ದುರಂತ: ತನಿಖೆಗೆ ನಿವೃತ್ತ ವಾಯುಪಡೆ ಮುಖ್ಯಸ್ಥ
(Mangalore Air Crash | Enquiry | Air Marshal | Bhushan Nilkanth Gokhale)
ಮಂಗಳೂರಿನಲ್ಲಿ ಮೇ 22ರಂದು ನಡೆದ ವಿಮಾನ ದುರಂತದ ಕುರಿತು ವಿಚಾರಣೆ ನಡೆಸಲು ಸರಕಾರವು ಮಾಜಿ ವಾಯುಸೇನಾ ಮುಖ್ಯಸ್ಥ ಏರ್ ಮಾರ್ಷಲ್ ಭೂಷಣ್ ನೀಲಕಂಥ ಗೋಖಲೆ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿದ್ದು, ಆಗಸ್ಟ್ 31ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಏರ್ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ ವಿಮಾನವು ಬಜಪೆ ವಿಮಾನ ನಿಲ್ದಾಣದ ರನ್ವೇಯಿಂದ ಕೆಂಜಾರು ಬಳಿ ಕೆಳಗೆ ಪತನಗೊಂಡು ಹೊತ್ತಿ ಉರಿದ ಪರಿಣಾಮವಾಗಿ 158 ಮಂದಿ ಬಲಿಯಾಗಿದ್ದರು. ಇದಕ್ಕೆ ಕಾರಣವಾದ ಎಲ್ಲ ಅಂಶಗಳ ಕುರಿತು ತನಿಖೆ ನಡೆಸುವಂತೆ ಗೋಖಲೆ ಆಯೋಗಕ್ಕೆ ಸೂಚಿಸಲಾಗಿದೆ.
ವಿಮಾನವು ದುಬೈಯಿಂದ ಮಂಗಳೂರಿಗೆ ಬರುತ್ತಿತ್ತು. ಈ ಘಟನೆಯಲ್ಲಿ 8 ಮಂದಿ ಪವಾಡಸದೃಶವಾಗಿ ಪಾರಾಗಿದ್ದರು.