ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆತ ಪತಿಯಲ್ಲ, ಈಕೆ ಪತ್ನಿಯಲ್ಲ; ಇದು ಸಹಬಾಳ್ವೆ ರಾದ್ಧಾಂತ! (live-in partner | Tamil film actor | Indira | P Satishkumar)
Bookmark and Share Feedback Print
 
ದಾಂಪತ್ಯ ಸಂಬಂಧಗಳೇ ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಅಥವಾ ಶಿಥಿಲಗೊಳಿಸಲೆಂದೇ ಭಾರತದಲ್ಲೂ ಮೈದಳೆದಿರುವ ಲಿವ್-ಇನ್ ರಿಲೇಷನ್‌ಶಿಪ್‌ ರಾದ್ಧಾಂತವಿದು. ಇದೀಗ ಕಚ್ಚಾಡಿಕೊಂಡು ಒಬ್ಬರ ಮೇಲೊಬ್ಬರು ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆಕೆಯ ಹೆಸರು ಇಂದಿರಾ. ಕತ್ರಾದು ಕಳವು, ಆಡು ಪುಲಿ ಆಟಂ, ಪತ್ತು ವನ್ನಾ ರೋಸಾ ಮುಂತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾಕೆ. ಮೊದಲ ಗಂಡ ಮಹೇಶ್‌ನಿಂದ ಬೇರ್ಪಟ್ಟ ನಂತರ ಪಿ. ಸತೀಶ್ ಕುಮಾರ್ ಎಂಬಾತನ ಜತೆ ಸಹಬಾಳ್ವೆ (ಲಿವ್-ಇನ್) ಸಂಬಂಧ ಹೊಂದಿದ್ದಳು.

ಸ್ವಲ್ಪ ಸಮಯ ಎಲ್ಲವೂ ಸರಿಯಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ತನಗೆ ಲಾಭವಾಗಬೇಕೆಂಬ ನಿಟ್ಟಿನಲ್ಲಿ ಕೆಲ ರಾಜಕಾರಣಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಸತೀಶ್ ಬಲವಂತ ಮಾಡುತ್ತಿದ್ದಾನೆ ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ಇದೀಗ ಇಂದಿರಾ ದೂರು ನೀಡಿದ್ದಾಳೆ.

ನನಗೆ ಮೊದಲೊಂದು ಮದುವೆಯಾಗಿತ್ತು ಎನ್ನುವುದು ಸತೀಶ್‌ಗೆ ಗೊತ್ತಿತ್ತು. ನಾನು ಹಲವು ತಮಿಳು ಸಿನಿಮಾಗಳಲ್ಲಿ ಡ್ಯಾನ್ಸರ್ ಮತ್ತು ನಟಿಯಾಗಿ ಕಾರ್ಯನಿರ್ವಹಿಸಿದ್ದವಳು. ಆಗ ಸತೀಶ್ ನನ್ನ ಕಾರಿನ ಚಾಲಕನಾಗಿದ್ದ. ಬಳಿಕ ನಾವು ಮದುವೆಯಾಗದೆ ಜತೆಯಾಗಿ ವಾಸಿಸಲಾರಂಭಿಸಿದೆವು ಎಂದು ಇಂದಿರಾ ತನ್ನ ಎರಡನೇ ಸಂಬಂಧದ ಕುರಿತು ವಿವರಣೆ ನೀಡಿದ್ದಾಳೆ.

ಇದಾದ ಕೆಲ ಸಮಯದ ನಂತರ ಪಕ್ಷವೊಂದರಲ್ಲಿ ಆಯಕಟ್ಟಿನ ಸ್ಥಾನ ಪಡೆದುಕೊಳ್ಳುವ ಸಲುವಾಗಿ ನನ್ನನ್ನು ಕೆಲವು ರಾಜಕಾರಣಿಗಳ ಜತೆ ದೈಹಿಕ ಸಂಬಂಧ ಬೆಳೆಸುವಂತೆ ಬಲವಂತಪಡಿಸಿದ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಅದೇ ಕಾರಣದಿಂದ ನನ್ನ ಹೆಸರನ್ನು ಹಾಳು ಮಾಡಬೇಕೆಂದು ಆತ ದೂರು ನೀಡಿದ್ದಾನೆ. ನಾನು ಆತನಲ್ಲಿ ಹಣಕ್ಕೆ ಯಾವತ್ತೂ ಬೇಡಿಕೆ ಮುಂದಿಟ್ಟವಳಲ್ಲ ಎಂದಿದ್ದಾಳೆ.

ಸತೀಶ್ ಆರೋಪವೇನು?
ನಟಿ ಇಂದಿರಾ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಸತೀಶ್ ಕೂಡ ಪ್ರತಿದೂರು ದಾಖಲಿಸಿದ್ದಾನೆ. 'ಅವಳು ಕೆಲವು ವಯಸ್ಕರ (ಸೆಕ್ಸ್) ಸಿನಿಮಾಗಳಲ್ಲಿ ನಟಿಸಿದ್ದ ವಿಚಾರವನ್ನು ನನ್ನಿಂದ ಮುಚ್ಚಿಟ್ಟಿದ್ದಳು. ಅಲ್ಲದೆ 30 ಲಕ್ಷ ರೂಪಾಯಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು' ಎಂದು ಆರೋಪಿಸಿದ್ದಾನೆ.

ಆಕೆ ತನಗೆ ಮೊದಲೊಂದು ಮದುವೆಯಾಗಿತ್ತು ಎನ್ನುವುದನ್ನು ಯಾವತ್ತೂ ಹೇಳಿರಲಿಲ್ಲ. ಅಲ್ಲದೆ ನನಗೆ ಇಷ್ಟವಿಲ್ಲದಿದ್ದರೂ, ಸಹಬಾಳ್ವೆ ಸಂಬಂಧ ಹೊಂದುವಂತೆ ಬಲವಂತಕ್ಕೊಳಪಡಿಸಿದ್ದಳು. ಅಲ್ಲದೆ ಹಲವಾರು ಬಾರಿ ನನಗೆ ನಿದ್ದೆ ಮಾತ್ರೆ ಕೊಟ್ಟು ಕಿರುಕುಳ ನೀಡಿದ್ದಾಳೆ. 30 ಲಕ್ಷ ರೂಪಾಯಿ ಹಣ ನೀಡದೇ ಇದ್ದರೆ ನಿನ್ನ ವಿರುದ್ದ ದೂರು ನೀಡುವುದಾಗಿ ಬೆದರಿಸುತ್ತಿದ್ದಳು. ಯಾವುದಕ್ಕೂ ಬಗ್ಗದೇ ಇದ್ದಾಗ ಗೂಂಡಾಗಳನ್ನು ಕಳುಹಿಸಿ ಹೆದರಿಸಲು ಯತ್ನಿಸಿದ್ದಾಳೆ. ಹಾಗಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ