ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹವನ್ನು ನೋಡಲು ಸಾಮಾನ್ಯರಿಗೆ ಭಯವಾಗುತ್ತದೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ದೇಹವನ್ನೇ ಬೇಯಿಸಿ ತಿಂದದ್ದನ್ನು ಎಲ್ಲಾದರೂ ಕೇಳಿದ್ದೀರಾ?
ಹೌದು. ವಿಚಿತ್ರವಾದರೂ ಇದು ಸತ್ಯ. ಇಂಥದ್ದೊಂದು ವಿಕ್ಷಿಪ್ತ ಘಟನೆ ಕರೀಂಗಂಜ್ನ ಬಂತರಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸತ್ತ ವ್ಯಕ್ತಿಯ ದೇಹವನ್ನೇ ಬೇಯಿಸಿಕೊಂಡು ತಿಂದಿದ್ದಾರೆ. ವಿಚಿತ್ರವೆಂದರೆ ಹೀಗೆ ಸತ್ತ ವ್ಯಕ್ತಿಯ ಮೃತದೇಹವನ್ನು ಬೇಯಿಸಿ ತಿಂದದ್ದು ಇನ್ಯಾರೂ ಅಲ್ಲ. ಆ ಮೃತ ವ್ಯಕ್ತಿಯ ಸೋದರ ಸಂಬಂಧಿಗಳು!
ಗ್ರಾಮದಲ್ಲಿ ಹರಿಪ್ರಸಾದ್ ರಾಕಿಯಾಸನ್ (50) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು. ಇದು ಯಾರಿಗೂ ಗೊತ್ತಾಗಬಾರದೆಂದು ಸೋದರ ಸಂಬಂಧಿಗಳಾದ ದಿಲ್ಬುರ್ ರಾಕಿಯಾಸನ್ (33), ಸುಕುಮಾರ್ ರಾಕಿಯಾಸನ್ (34) ಹಾಗೂ ಸಂಜಿಬ್ ರಾಕಿಯಾಸನ್ (21) ಇವರುಗಳು ಸತ್ತ ವ್ಯಕ್ತಿಯ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡುವ ಬದಲು ತುಂಡು ತುಂಡಾಗಿ ಕತ್ತರಿಸಿ ಬೇಯಿಸಿ ತಿಂದಿದ್ದಾರೆ.
ಈ ಕಾರ್ಯವನ್ನು ಗ್ರಾಮಸ್ಥರು ಕಣ್ಣಾರೆ ಕಂಡಿದ್ದು ಪೊಲೀಸರಿಗೆ ವಿಷಯ ತಿಳಿಸಿದ್ದು, ಮೂವರನ್ನೂ ಬಂಧಿಸಲಾಗಿದೆ.