ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತೀಂದ್ರಿಯ ಶಕ್ತಿಗಾಗಿ ಮಗು ಬಲಿಕೊಟ್ಟು ರಕ್ತ ಕುಡಿದರು! (Fakir 'beheads' toddler | Abdul Gafoor | Kali Amman | G Khader Yusuf)
Bookmark and Share Feedback Print
 
ಅತೀಂದ್ರಿಯ ಶಕ್ತಿಯ ಹಿಂದೆ ಬಿದ್ದ ತಮಿಳುನಾಡು ಫಕೀರನೊಬ್ಬ ಒಂದೂವರೆ ವರ್ಷದ ಗಂಡು ಮಗುವನ್ನು ಕಾಳಿ ಮಾತೆಗೆ ಬಲಿಕೊಟ್ಟು ಅಮಾನವೀಯ ರೀತಿಯಲ್ಲಿ ರಕ್ತ ಆಪೋಶನ ಮಾಡಿದ ಬಳಿಕ ದೇಹದ ಭಾಗಗಳನ್ನು ವಿವಿಧೆಡೆ ಸಮಾಧಿ ಮಾಡಿದ ವಿಕೃತ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ನಿಗೂಢ ಧಾರ್ಮಿಕ ಉಪಾಸನಾ ವಿಧಿವಿಧಾನಗಳಂತೆ ಆ ಫಕೀರ ಮಗುವಿನ ಶಿರಚ್ಛೇದ ಮಾಡಿದ ಬಳಿಕ ರಕ್ತವನ್ನು ಕುಡಿದಿರುವ ಸಾಧ್ಯತೆಗಳಿವೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.

ಅಬ್ದುಲ್ ಗಫೂರ್ (31) ಎಂಬಾತನೇ ಈ ಕ್ರೂರ ಫಕೀರ. ಈತ ಕಾಳಿ ಮಾತೆಯನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಈ ಕೃತ್ಯವನ್ನು ಎಸಗಿದ್ದಾನೆ. ಘಟನೆ ಬಯಲಿಗೆ ಬರುತ್ತಿದ್ದಂತೆ ಫಕೀರ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಾಥಪುರಂ ಜಿಲ್ಲೆಯ ಎರ್ವಾಡಿ ದರ್ಗಾ ಸಮೀಪ ಮಗುವಿನ ಮುಂಡವನ್ನು ಹಾಗೂ ತೂತುಕುಡಿ ಜಿಲ್ಲೆಯ ಯೆರಾಲ್ ಸಮೀಪದ ಕಲ್ಲಾಮೋಳಿ ಎಂಬಲ್ಲಿಂದ ರುಂಡವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದೇಹದ ಭಾಗಗಳನ್ನು ಇಲ್ಲಿ ಹೂತು ಹಾಕಲಾಗಿತ್ತು. ಜತೆಗೆ ರಕ್ತತರ್ಪಣ ಮಾಡಲಾಗಿದ್ದ ಕಾಳಿ ಮಾತೆಯ ಪ್ರತಿರೂಪವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತೂತುಕುಡಿ ಜಿಲ್ಲೆಯ ಕಯಾಲ್‌ಪಟ್ಟಣಂ ಎಂಬಲ್ಲಿಂದ ಜಿ. ಖಾದರ್ ಯೂಸುಫ್ ಎಂಬ ಒಂದೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಗಫೂರ್, ನಂತರ ದೇವಿಗೆ ಬಲಿ ಕೊಟ್ಟಿದ್ದ. ಅತೀಂದ್ರಿಯ ಶಕ್ತಿಯನ್ನು ಪಡೆದುಕೊಳ್ಳಲು ಮಗುವೊಂದನ್ನು ಬಲಿ ಕೊಟ್ಟು, ಅದರ ರಕ್ತವನ್ನು ಕುಡಿಯಬೇಕೆಂದು ನನಗೆ ಕನಸಿನಲ್ಲಿ ಸೂಚನೆ ಬಂದಿತ್ತು ಎಂದು ಪೊಲೀಸರಲ್ಲಿ ಫಕೀರ ಹೇಳಿಕೊಂಡಿದ್ದಾನೆ.

ವಿಧವೆ ಮಹಿಳೆ ಶೆರಿನ್ ಫಾತಿಮಾ ಎಂಬಾಕೆ ಇಲ್ಲಿನ ದರ್ಗಾವೊಂದರಲ್ಲಿ ಒಬ್ಬಂಟಿಯಾಗಿ ಕಳೆದ ಕೆಲವು ತಿಂಗಳುಗಳಿಂದ ವಾಸಿಸುತ್ತಿದ್ದಳು. ಇದನ್ನೇ ಬಳಸಿಕೊಂಡ ಗಫೂರ್ ಮತ್ತು ಆತನ ಪತ್ನಿ ರಮಲಾ ಬೀವಿ (28), ಮಗುವಿನ ತಾಯಿ ಮಲಗಿದ್ದ ಸಂದರ್ಭದಲ್ಲಿ ಅಪಹರಿಸಿದ್ದರು.

ಅಪಹರಣದ ನಂತರ ಮಗು ಜೋರಾಗಿ ಕಿರುಚಲಾರಂಭಿಸಿದಾಗ ಯಾವುದೇ ಕರುಣೆ ತೋರಿಸದ ಗಫೂರ್ ಮಗುವಿನ ಗಂಟಳನ್ನು ಸೀಳಿ ಹಾಕಿದ್ದ. ಬಳಿಕ ಮಗುವಿನ ಶಿರಚ್ಛೇದ ಮಾಡಿ, ದೇಹವನ್ನು ವಿವಿಧೆಡೆ ಹೂಳಿದ್ದರು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ