ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೊಬ್ಬ ಯುವಕನ ಕೈ ಕಟ್; ಏನಾಗಿದೆ ಕೇರಳಿಗರಿಗೆ? (Kerala | hand cut off | Kerala | Abhilash)
Bookmark and Share Feedback Print
 
ತಂಗಿಯನ್ನು ಚುಡಾಯಿಸಿದ್ದ ವ್ಯಕ್ತಿಯೊಬ್ಬನನ್ನು ಪ್ರಶ್ನಿಸಿದ್ದನ್ನೇ ಮುಂದಿಟ್ಟುಕೊಂಡ ಗುಂಪೊಂದು 24ರ ಹರೆಯದ ಯುವಕನೊಬ್ಬನ ಕೈಯನ್ನೇ ಕತ್ತರಿಸಿ ಹಾಕಿದ ಮತ್ತೊಂದು ಪ್ರಕರಣ ಕೇರಳದಿಂದ ವರದಿಯಾಗಿದೆ.

ಇತ್ತೀಚೆಗಷ್ಟೇ ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ ಪ್ರಸಂಗ ನಡೆದಿರುವ ಸಾಂಪ್ರದಾಯಿಕ ರಾಜ್ಯದಲ್ಲಿ ಮತ್ತೊಂದು ಅಂತಹುದೇ ಘಟನೆ ನಡೆದಿರುವುದು ದುರದೃಷ್ಟಕರವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸುತ್ತಿದ್ದಾರೆ.

ಈ ಘಟನೆ ನಡೆದಿರುವುದು ಅಳಪ್ಪುರಂ ಜಿಲ್ಲೆಯ ಕೆಂಗಾನ್ನೂರ್ ಬಳಿ. ಅಭಿಲಾಷ್ ಎಂಬ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆಗಾಗಿ ಕಾಯುತ್ತಿದ್ದ ಯುವಕರ ಗುಂಪೊಂದು ಬುಧವಾರ ರಾತ್ರಿ ಇಲ್ಲಿನ ಅರನಾಮುಲಾ ಎಂಬಲ್ಲಿನ ಕೋಟಾ ಜಂಕ್ಷನ್ದಾ ಸಮೀಪ ದಾಳಿ ನಡೆಸಿ ಕೈಯನ್ನೇ ಕತ್ತರಿಸಿ ಹಾಕಿದೆ.

ಕೆಲವು ವಾರಗಳ ಹಿಂದೆ ತನ್ನ ಸಹೋದರಿ ಸಂಬಂಧಿಯ ಮೇಲೆ ಮನೋಜ್ ಎಂಬಾತ ಕೀಳಭಿರುಚಿಯಲ್ಲಿ ಕಾಮೆಂಟ್ ಮಾಡುತ್ತಿದ್ದುದು ಅಭಿಲಾಷ್‌ಗೆ ತೀವ್ರ ಅಸಮಾಧಾನ ತಂದಿತ್ತು. ಇದನ್ನು ಆರೋಪಿ ಯುವಕನಲ್ಲಿ ಈತ ಪ್ರಶ್ನಿಸಿದ್ದ. ಇದೇ ಕಾರಣಕ್ಕಾಗಿ ಆಟೋರಿಕ್ಷಾದಲ್ಲಿ ಮನೆಯವರ ಜತೆ ತೆರಳುತ್ತಿದ್ದ ಅಭಿಲಾಷ್ ಮೇಲೆ ಗುಂಪು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ದಾಳಿಯಿಂದಾಗಿ ಮೂವರು ಮಹಿಳೆಯರು ಸೇರಿದಂತೆ ಬಲಿಪಶು ಯುವಕನ ಸಂಬಂಧಿಕರು ಕೂಡ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳಿಂದ ಅಭಿಲಾಷ್‌ನನ್ನು ರಕ್ಷಿಸಲು ಯತ್ನಿಸಿದಾಗ ಆತನ ತಾಯಿ ವಿಜಯ ಕುಮಾರಿ, ಅಂಕಲ್ ಪೊಡಿಯನ್, ಪೊಡಿಯನ್ ಅವರ ಪತ್ನಿ ಉಷಾ ಮತ್ತು ಅತ್ತಿಗೆ ಶಾಂತಕುಮಾರಿಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೊದಲು ರಿಕ್ಷಾದ ಗಾಜುಗಳನ್ನು ಒಡೆದು ಹಾಕಿದ ನಾಲ್ವರು ಯುವಕರಿದ್ದ ಗುಂಪು, ನಂತರ ಅಭಿಲಾಷ್‌ನನ್ನು ಎಳೆದು ಹಾಕಿ ಹರಿತವಾದ ಕತ್ತಿಯಿಂದ ಕತ್ತರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬಹುತೇಕ ತುಂಡಾಗಿದ್ದ ಮುಂಗೈ ಸಹಿತ ಅಭಿಲಾಷ್‌ನನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಇದೀಗ 11 ಗಂಟೆಯ ನಿರಂತರ ಶಸ್ತ್ರಚಿಕಿತ್ಸೆಯ ಮೂಲಕ ಕೈಯನ್ನು ಮರು ಜೋಡಿಸಲಾಗಿದೆ.

ಈ ದಾಳಿಯಲ್ಲಿ ಅದೀಪ್ ಬಿ. ಚಂದ್ರನ್ ಮತ್ತು ಆತನ ಗೆಳೆಯ ಸುನಿಲ್ ಸೇರಿದಂತೆ ಒಟ್ಟು ಎಂಟು ಮಂದಿ ಪಾಲ್ಗೊಂಡಿದ್ದರು. ವರದಿಗಳ ಪ್ರಕಾರ ಅದೀಪ್ ಇಲ್ಲಿನ ಭಾರತೀಯ ಯುವ ಮೋರ್ಚಾದ ಮಾಜಿ ಮಂಡಲಾಧ್ಯಕ್ಷ. ಗುಂಪಿನಲ್ಲಿರುವ ಇತರರು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು. ಅಭಿಲಾಷ್ ಸಿಪಿಐಎಂ ಪರವಾಗಿರುವವನು.

ಆದರೆ ಘಟನೆಯ ಹಿಂದೆ ಯಾವುದೇ ರಾಜಕೀಯ ಇದೆ ಎಂಬ ವರದಿಗಳನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ