ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಸರಿ ಭಯೋತ್ಪಾದನೆ:ಚಿದಂಬರಂ ವಿರುದ್ಧ ಪ್ರಕರಣ ದಾಖಲು (Union home minister | Swami nijanand tirth | Saffron terrorism | P. chidambaram)
Bookmark and Share Feedback Print
 
PTI
ದೇಶದಲ್ಲಿ ಕೇಸರಿ ಭಯೋತ್ಪಾದನೆ ಹೆಚ್ಚಳವಾಗುತ್ತಿದೆ ಎನ್ನುವ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಹೇಳಿಕೆಯನ್ನು ಖಂಡಿಸಿ,ದೇವಮಾನವ ಖ್ಯಾತಿಯ ಸ್ವಾಮಿ ನಿಜಾನಂದ ತೀರ್ಥ ಸ್ಥಳೀಯ ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗೃಹಸಚಿವ ಪಿ.ಚಿದಂಬರಂ ಹಿಂದೂ ಸಮುದಾಯವನ್ನು ಭಯೋತ್ಪಾದನೆಗೆ ಹೋಲಿಸಿ ಅಪಮಾನವೆಸಗಿದ್ದಾರೆ ಎಂದು ಸ್ವಾಮಿ ನಿಜಾನಂದ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಅಗಸ್ಟ್ 25 ರಂದು ನಡೆದ ಭಯೋತ್ಪಾದನೆ ನಿಗ್ರಹ ಸಭೆಯಲ್ಲಿ ಕೇಸರಿ ಭಯೋತ್ಪಾದನೆ ವಿರುದ್ಧ ಎಚ್ಚರಿಕೆವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಚಿದಂಬರಂ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಕರೆ ನೀಡಿದ್ದರು.

ಚಿದಂಬರಂ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ ಸಮುದಾಯವನ್ನು ಭಯೋತ್ಪಾದನೆಗೆ ಹೋಲಿಸಿ, ಧರ್ಮವನ್ನು ಅಪವಿತ್ರಗೊಳಿಸಿ, ಅಪಮಾನವೆಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಸಚಿವ ಚಿದಂಬರಂ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದು ಸ್ವಾಮಿ ನಿಜಾನಂದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ