ರೈತನ ಆತ್ಮಹತ್ಯೆ
ಮೈಕ್ರೋ ಫೈನಾನ್ಸ್ಗಳು ನೀಡುವ ಸಾಲ ಯಾವ ರೀತಿಯ ಅಪಾಯಗಳನ್ನು ಸೃಷ್ಟಿಸುತ್ತಿವೆ ಎಂಬುದಕ್ಕೆ ಆಂಧ್ರಪ್ರದೇಶ ಮತ್ತೊಂದು ಉದಾಹರಣೆಯಾಗಿದೆ. ಎಂಎಫ್ಐ ಎಂಬ ಫೈನಾನ್ಸ್ನಿಂದ ಸಾಲ ಪಡೆದಿದ್ದ ಗುಂಟೂರಿನ ತಲಾರಿ ಬಾಲನರಸು ಎಂಬಾತ ಮರು ಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ಹೇಳಿವೆ.