ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದಲ್ಲಿ ವಿಧ್ವಂಸಕ ಸಂಚಿಗೆ ಐಎಸ್ಐನಿಂದ ನಕ್ಸಲೀಯರ ಬಳಕೆ! (Naxal | ISI | India | Karnataka | Pakistan)
Bookmark and Share Feedback Print
 
ಭಾರತ ಸರಕಾರದ ವಿರುದ್ಧವೇ ಸಮರ ಸಾರಿರುವ ನಕ್ಸಲೀಯರನ್ನು ತನ್ನ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಕಾಶ್ಮೀರದ ಪ್ರತ್ಯೇಕತವಾದಿಗಳು ಮತ್ತು ಅವರ ಬಗ್ಗೆ ಸಹಾನುಭೂತಿ ಹೊಂದಿದವರ ನೆರವು ಪಡೆಯುತ್ತಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಭಾರತದ ಭದ್ರತಾ ವ್ಯವಸ್ಥೆಗೆ ಸೆಡ್ಡು ಹೊಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಐಎಸ್ಐ ಈ ತಂತ್ರ ಅನುಸರಿಸುತ್ತಿರುವುದಾಗಿ ವರದಿ ಹೇಳಿದೆ. ಬಂಧಿತ ಕೆಲವು ಉಗ್ರರು ಹಾಗೂ ನಕ್ಸಲ್ ಕಾರ್ಯಕರ್ತರು ಐಎಸ್ಐನ ಈ ಪ್ರಳಯಾಂತಕ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಇತ್ತೀಚೆಗೆ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಬಂಧಿತರಾದ ನಾಲ್ವರಿಂದ 25 ಲಕ್ಷ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿತ್ತು. ಈ ಹಣವನ್ನು ಐಎಸ್ಐ ನಕ್ಸಲೀಯರಿಗೆ ಹಂಚಲು ನೀಡಿತ್ತು ಎಂಬ ಮಾಹಿತಿಯನ್ನು ಬಂಧಿತರು ಹೊರಹಾಕಿದ್ದರು.

ಛೋಟಾ ಶಕೀಲ್ ಜತೆ ಐಎಸ್ಐ ಸಂಪರ್ಕ ಹೊಂದಿದೆ. ಶಕೀಲ್‌ಗೆ ಹತ್ತಿರವಾಗಿರುವ ಅಲ್ತಾಫ್ ಎಂಬಾತನೇ ಕರ್ನಾಟಕ, ಆಂಧ್ರದಲ್ಲಿ ಹಣ ಹಂಚಲು ಸೂಚಿಸಿದ್ದಾನೆ ಎಂದು ಆರೋಪಿಸಲಾಗಿದೆ ಎಂಬುದಾಗಿ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ