ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ಲೀಸ್...ಬಕ್ರೀದ್‌ಗೆ ದನ ಕಡಿಯಬೇಡಿ: ಮುಸ್ಲಿಮರಿಗೆ ದಿಯೋಬಂದ್ (Id ul Adha | Dar-ul-Uloom | cow slaughter | Hindus | Muslims)
Bookmark and Share Feedback Print
 
ಹಿಂದೂಗಳ ಧಾರ್ಮಿಕ ಭಾವನೆ ಗೌರವಿಸುವ ನಿಟ್ಟಿನಲ್ಲಿ ಈದ್ ಉಲ್ ಆದ್‌ಹಾ ದಿನದಂದು ಗೋವುಗಳನ್ನು ಬಲಿಕೊಡಬೇಡಿ ಎಂದು ಇಸ್ಲಾಮಿಕ್ ಸಂಸ್ಥೆಯಾದ ದಾರುಲ್ ಉಲೂಮ್ ದಿಯೋಬಂದ್ ಮುಸ್ಲಿಮರಿಗೆ ಕರೆ ನೀಡಿದೆ.

ಬುಧವಾರ (ನ.17)ದಂದು ಮುಸ್ಲಿಮರು ಬಕ್ರೀದ್ ಹಬ್ಬ ಆಚರಿಸುತ್ತಿದ್ದು, ತ್ಯಾಗ ಬಲಿದಾನದ ಹೆಸರಿನಲ್ಲಿ ದನಗಳನ್ನು ಹತ್ಯೆ ಮಾಡುವುದು ಬೇಡ. ಅದರ ಬದಲಾಗಿ ಇತರೆ ಪ್ರಾಣಿಗಳನ್ನು ಬಳಸಿ ಎಂದು ದಾರುಲ್ ಉಲೂಮ್ ಉಪ ಕುಲಪತಿ ಮೌಲಾನಾ ಅಬ್ದುಲ್ ಖಾಲೀಖ್ ಹೇಳಿದ್ದಾರೆ.

ಈ ನಿಟ್ಟಿನಲ್ಲಾದರೂ ಮುಸ್ಲಿಮರು ಕಾನೂನನ್ನು ಮತ್ತು ಹಿಂದೂಗಳ ಭಾವನೆಯನ್ನು ಗೌರವಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಹಿಂದೂಗಳ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ, ಹಾಗಾಗಿ ಪವಿತ್ರ ಬಕ್ರೀದ್ ಹಬ್ಬದಂದು ಗೋವುಗಳ ಬಲಿ ಬೇಡ ಎಂದು ಮುಸ್ಲಿಮರಲ್ಲಿ ವಿನಂತಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ