ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಲೆ ಮರೆಸಿಕೊಂಡ ಉಗ್ರರ ಪಟ್ಟಿಯಲ್ಲೂ ಕರ್ನಾಟಕ ಟಾಪ್ (Indian Mujahideen | Iqbal Bhatkal | Karnataka | India)
Bookmark and Share Feedback Print
 
PR
ಕೇಂದ್ರ ಸರಕಾರವು ತಲೆ ಮರೆಸಿಕೊಂಡಿರುವ 19 ಮಂದಿ ಇಂಡಿಯನ್ ಮುಜಾಹಿದೀನ್ ಉಗ್ರರು ಸೇರಿದಂತೆ 31 ದೇಸೀ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವರಲ್ಲಿ ಬರೋಬ್ಬರಿ 10 ಮಂದಿ ಕರ್ನಾಟಕದವರು ಕಾಣಿಸಿಕೊಳ್ಳುವುದರ ಮೂಲಕ ರಾಜ್ಯದತ್ತ ತನಿಖಾ ದಳಗಳು ಕೆಂಗಣ್ಣು ಬೀರುವಂತಾಗಿದೆ.

ಇಂಡಿಯನ್ ಮುಜಾಹಿದೀನ್ ಸ್ಥಾಪಕ ಸದಸ್ಯ ಹಾಗೂ ಈಗಿನ ಮುಖ್ಯಸ್ಥ ಇಕ್ಬಾಲ್ ಭಟ್ಕಳ್, ಆತನ ಸಹೋದರ ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಕರ್ನಾಟಕ ಮೂಲದ ಭಯೋತ್ಪಾದಕರು. ಇವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದ ಇತರ ಏಳು ಮಂದಿಯ ಹೆಸರು ಮತ್ತು ವಿವರಗಳು ನಿರ್ದಿಷ್ಟವಾಗಿ ಲಭ್ಯವಿಲ್ಲ.

ಉಳಿದವರನ್ನು ಆರಿಜ್ ಖಾನ್, ಮಿರ್ಜಾ ಶಾದಾಬ್ ಬೇಗ್, ಮೊಹಮ್ಮದ್ ಸಾಜಿದ್, ಮೊಹಮ್ಮದ್ ಖಾಲಿದ್, ಡಾ. ಶಹನಾವಾಜ್, ಅಸಾದುಲ್ಲಾ ಅಖ್ತರ್, ಅಬೂ ರಷೀದ್, ಅಬ್ದುಸ್ ಸುಬಾನ್ ಉಸ್ಮಾನ್ ಖುರೇಷಿ, ಅಬೂ ಪೈಸಲ್, ಮೊಹ್ಸಿನ್ ಚೌಧರಿ, ಅಹ್ಮದ್ ಯಾಸಿನ್, ಮುದಾಸಿರ್ ಯಾಸಿನ್, ಮುಜೀಬ್, ಅಲಾಂಜೆಬ್ ಆಫ್ರಿದಿ, ಮೊಹಮ್ಮದ್ ಹುಸೇನ್, ಮೌಲಾನಾ ಸುಲ್ತಾನ್ ಶಾ, ಕೆ.ಪಿ. ಸಬೀರ್ ಮತ್ತು ಮೊಹಮ್ಮದ್ ಶಮೀರ್ ಫಗ್ನೆಸ್ಟ್ ಮುಂತಾದವರು ಎಂದು ಕೇಂದ್ರ ಪಟ್ಟಿ ಮಾಡಿದೆ.

ಒಟ್ಟಾರೆ 31 ತಲೆ ಮರೆಸಿಕೊಂಡಿರುವ ಭಯೋತ್ಪಾದಕರಲ್ಲಿ ಎಂಟು ಮಂದಿ ಉತ್ತರ ಪ್ರದೇಶದವರು (ಎಲ್ಲರೂ ಅಜಂಗಢದವರು), ಹತ್ತು ಮಂದಿ ಕರ್ನಾಟಕದವರು (ಅವರಲ್ಲಿ ಮೂರು ಮಂದಿ ಭಟ್ಕಳದವರು), ಆರು ಮಂದಿ ಕೇರಳದವರು (ಎಲ್ಲರೂ ಕಣ್ಣೂರಿನವರು), ಮಹಾರಾಷ್ಟ್ರದ ಮೂರು ಮಂದಿ, ಗುಜರಾತ್ ಮತ್ತು ಜಾರ್ಖಂಡ್‌ನ ತಲಾ ಇಬ್ಬಿಬ್ಬರು ಎಂದು ಕೇಂದ್ರ ಹೇಳಿದೆ.

ಇವರಲ್ಲಿ ಎಲ್ಲಾ ಭಯೋತ್ಪಾದಕರು ಪ್ರಸಕ್ತ ದೇಶದಲ್ಲಿಲ್ಲ. ಅವರು ಪಾಕಿಸ್ತಾನ ಅಥವಾ ಮಧ್ಯಪ್ರಾಚ್ಯಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ. ಸುಮಾರು 10 ಮಂದಿ ದೇಶದಲ್ಲೇ ಇದ್ದಾರೆ.

ಇವರೆಲ್ಲರನ್ನೂ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿರುವ ಕೇಂದ್ರ, ಸಂಬಂಧಪಟ್ಟವರ ಭಾವಚಿತ್ರಗಳನ್ನು ವಿದೇಶಗಳೊಂದಿಗೆ ಹಂಚಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ