ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರಕ್ಕೊಳಗಾದ ಬಾಲಕಿ ಬಂಧಮುಕ್ತಕ್ಕೆ ಮಾಯ ಆದೇಶ (BSP MLA | Mayawati | Lucknow | raped | Uttar Pradesh)
Bookmark and Share Feedback Print
 
ಬಿಎಸ್ಪಿ ಶಾಸಕನಿಂದ ಅತ್ಯಾಚಾರಕ್ಕೊಳಗಾಗಿ ನಂತರ ಬಂಧನಕ್ಕೊಳಗಾಗಿದ್ದ ಬಂಡಾ ಪ್ರಾಂತ್ಯದ ಬಾಲಕಿಯನ್ನು ಬಿಡುಗಡೆಗೊಳಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆದೇಶ ನೀಡಿದ್ದಾರೆ.

ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮಾಯಾವತಿ ಭರವಸೆ ನೀಡಿದರು. ಬಂಧನದಲ್ಲಿರುವ ಈ ಬಾಲಕಿಯ ಮೇಲೆ ಕಳ್ಳತನದ ಆರೋಪವಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಪೊಲೀಸರು ಬಂಧಿಸಿದ್ದರು.

ಬಿಎಸ್ಪಿ ಪಕ್ಷದ ಶಾಸಕ ನರೇನ್ ದ್ವಿವೇದಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಬಂದಾ ಪ್ರಾಂತ್ಯದ ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಳು. ಆದರೆ, ಆಕೆಯ ಮೇಲೆಯೇ ಕಳ್ಳತನದ ಆರೋಪ ಹೊರಿಸ ಪೊಲೀಸರು ಆಕೆ ದೂರು ನೀಡಿದ ಕೆಲ ದಿನಗಳ ನಂತರ ಆಕೆಯನ್ನು ಬಂಧಿಸಿದ್ದರು.

ನಂತರ ಈ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಬಾಲಕಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಡ ಹೆಚ್ಚಾಗಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಮಾಯಾವತಿ, ಬಾಲಕಿಯ ಬಿಡುಗಡೆಗೆ ಆದೇಶ ನೀಡಿದ್ದರು. ಅಲ್ಲದೇ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ