ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಿಹಾದ್‌ಗೆ ಆಡ್ವಾಣಿ ಕರೆ: ಆದರಿದು ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ (Advani | Jihad | Corruption | UPA | Congress | Scam)
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಕೂಡ ಜಿಹಾದ್‌ಗೆ ಕರೆ ಕೊಟ್ಟಿದ್ದಾರೆ. ಇದು ಉಗ್ರಗಾಮಿಗಳು ನಂಬಿರುವ ಜಿಹಾದ್ ಅಲ್ಲ, ಬದಲಾಗಿ, ಕೇಂದ್ರದ ಯುಪಿಎ ಸರಕಾರ ಮತ್ತು ಅಸ್ಸಾಂನ ಕಾಂಗ್ರೆಸ್ ಸರಕಾರಗಳ ವಿರುದ್ಧದ ಜಿಹಾದ್.

ಅಸ್ಸಾಂ ವಿಧಾನಸಭಾ ಚುನಾವಣೆಗಳಿಗಾಗಿ ಪ್ರಚಾರಕ್ಕೆ ಆಗಮಿಸಿರುವ ಆಡ್ವಾಣಿ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಭ್ರಷ್ಟಾಚಾರವೆಂಬುದು ಬಲವಾಗಿ ಬೇರೂರಿರುವ ಸಮಸ್ಯೆಯಾಗಿ ಬೆಳೆದಿದ್ದು, ಅದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ನುಗುತ್ತಿದೆ. ಸರಕಾರದ ಎಲ್ಲಾ ಮಟ್ಟದಲ್ಲಿಯೂ ಇರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಜನತೆ 'ಜಿಹಾದ್' (ಧರ್ಮಯುದ್ಧ)ಕ್ಕೆ ಸಿದ್ಧರಾಗಬೇಕಿದೆ ಎಂದು ಆಡ್ವಾಣಿ ನುಡಿದರು.

ವಿದೇಶೀ ಬ್ಯಾಂಕುಗಳಲ್ಲಿ ಕಪ್ಪು ಹಣ, ಕಂಡು ಕೇಳರಿಯದ ಬೆಲೆ ಏರಿಕೆ ಮತ್ತು ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ - ಈ ಮೂರು ಅಡಚಣೆಗಳನ್ನು ನಿವಾರಿಸಿಕೊಳ್ಳಲು ಜಿಹಾದ್ ಅಗತ್ಯವಾಗಿದೆ ಎಂದು ಆಡ್ವಾಣಿ ಹೇಳಿದರು.

ಅಸ್ಸಾಂನ ಮತ್ತೊಂದು ಕ್ಷೇತ್ರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಆಡ್ವಾಣಿ, ದೇಶದಲ್ಲಿ ಬೆಲೆ ಏರಿಕೆಗೆ ಅರ್ಥ ವ್ಯವಸ್ಥೆಯ ತಪ್ಪು ನಿರ್ವಹಣೆ ಕಾರಣವಲ್ಲ, ಬದಲಾಗಿ ಭ್ರಷ್ಟಾಚಾರ ಮತ್ತು ಕಾಂಗ್ರೆಸ್‌ನ ಅಪ್ರಾಮಾಣಿಕತೆಗಳೇ ಕಾರಣ ಎಂದು ಆರೋಪಿಸಿದರು.
ಇವನ್ನೂ ಓದಿ