ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿ ಸಹೋದರರ ಜತೆ ಸುಷ್ಮಾಗೆ ವ್ಯವಹಾರಿಕ ನಂಟು: ದಿಗ್ವಿಜಯ್ ಸಿಂಗ್ (Janardhan Reddy arrest | Sushma Swaraj | M Venkaiah Naidu | Digvijaya Singh | Manmohan Singh | corruption | Reddy Brothers)
ರೆಡ್ಡಿ ಸಹೋದರರ ಜತೆ ಸುಷ್ಮಾಗೆ ವ್ಯವಹಾರಿಕ ನಂಟು: ದಿಗ್ವಿಜಯ್ ಸಿಂಗ್
ನವದೆಹಲಿ, ಮಂಗಳವಾರ, 6 ಸೆಪ್ಟೆಂಬರ್ 2011( 09:57 IST )
ಬಳ್ಳಾರಿ ರೆಡ್ಡಿ ಸಹೋದರರ ಜತೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವ್ಯವಹಾರಿಕ ಸಂಬಂಧ ಹೊಂದಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ದಿಗ್ವಿಜಯ್ ಸವಾಲನ್ನು ಸ್ವಾಗತಿಸಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಈ ಸಂಬಂಧ ಯಾವುದೇ ತನಿಖೆ ಎದುರಿಸಲು ಸಿದ್ಧ. ಬೇಕಿದ್ದರೆ ಸ್ವತ: ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಅವರೇ ತನಿಖೆಗೆ ಮುಂದಾಗಲಿ ಎಂದು ಸವಾಲು ಹಾಕಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರೀ ವಿವಾದದಲ್ಲಿ ಸಿಲುಕಿರುವ ಮಾಜಿ ಪ್ರವಾಸೋದ್ಯಮ ಸಚಿವ ಹಾಗೂ ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಅವರನ್ನು ಸೋಮವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಸಂಬಂಧ ವಾಗ್ದಾಳಿ ನಡೆಸಿದ್ದ ದಿಗ್ವಿಜಯ್ ಸಿಂಗ್, ರೆಡ್ಡಿ ಸೋದರರ ಜತೆ ಹಿಂದಿನಿಂದಲೇ ವ್ಯವಹಾರಿಕ ನಂಟು ಹೊಂದಿರುವ ಸುಷ್ಮಾ ಸ್ವರಾಜ್ ಮತ್ತು ಎಂ ವೆಂಕಯ್ಯ ನಾಯ್ಡು ವಿರುದ್ಧವೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.
ಈ ಎಲ್ಲ ಆಪಾದನೆಗಳನ್ನು ತಳ್ಳಿ ಹಾಕಿರುವ ಸುಷ್ಮಾ ಸ್ವರಾಜ್, ಗಣಿಧಣಿಗಳ ಜತೆ ಯಾವುದೇ ವ್ಯವಹಾರಿಕ ಬಾಂಧವ್ಯ ಹೊಂದಿಲ್ಲ. ಬೇಕಿದದ್ದರೆ ಈ ವಿಷಯದ ಬಗ್ಗೆ ತನಿಖೆ ನಡೆಸಲು ಸ್ವತ: ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಖಂಡಿತವಾಗಿಯೂ ಈ ಬಗ್ಗೆ ತನಿಖೆ ಆಗಲಿ. ನನ್ನ ವಿರುದ್ಧ ಸರಕಾರ ಅಥವಾ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಬಹುದು. ಸತ್ಯಾಂಶ ಹೊರಬಂದರಷ್ಟೇ ನನಗೆ ನ್ಯಾಯ ದೊರಕಲಿದೆ ಎಂದಿದ್ದಾರೆ.