ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದು ರಾಜೀನಾಮೆ ನೀಡಲಿ, ಇಲ್ಲವೇ ವಜಾಗೊಳಿಸಿ: ಯಶವಂತ್ ಸಿನ್ಹಾ (Supreme Court | Subramanian Swamy | P Chidambaram | BJP | 2G scam)
ಚಿದು ರಾಜೀನಾಮೆ ನೀಡಲಿ, ಇಲ್ಲವೇ ವಜಾಗೊಳಿಸಿ: ಯಶವಂತ್ ಸಿನ್ಹಾ
ನವದೆಹಲಿ, ಶುಕ್ರವಾರ, 23 ಸೆಪ್ಟೆಂಬರ್ 2011( 09:12 IST )
ಪ್ರಣಬ್ ಮುಖರ್ಜಿ ಪತ್ರದಿಂದ 2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿದೆ ಎನ್ನುವುದು ಸ್ಪಷ್ಟವಾಗಿದೆ. ಚಿದಂಬರಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಥವಾ ಪ್ರಧಾನಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ವಜಾಗೊಳಿಸಿದ ನಂತರ, ಅವರ ವಿರುದ್ಧ ಸಿಬಿಐ ತನಿಖೆ ಕೂಡಾ ನಡೆಯಬೇಕು ಎಂದು ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಸರಕಾರವನ್ನು ಒತ್ತಾಯಿಸಿದ್ದಾರೆ.
2ಜಿ ತರಂಗ ಗುಚ್ಚ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ರಾಜೀನಾಮೆ ನೀಡಬೇಕು. 2ಜಿ ಹಗರಣದಲ್ಲಿ ಚಿದು ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
2ಜಿ ತರಂಗ ಗುಚ್ಚ ದರ ನಿಗದಿಯಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರೊಂದಿಗೆ ಅಂದಿನ ವಿತ್ತಸಚಿವ ಪಿ.ಚಿದಂಬರಂ ಜಂಟಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ವಿತ್ತಸಚಿವ ಪ್ರಣಬ್ ಮುಖರ್ಜಿ ಬರೆದ ಪತ್ರವನ್ನು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ, ಸುಪ್ರೀಂಕೋರ್ಟ್ಗೆ ದಾಖಲೆಗಳನ್ನು ಸಲ್ಲಿಸಿದ ನಂತರ ವಿಪಕ್ಷಗಳು ಚಿದಂಬರಂ ರಾಜೀನಾಮೆಗೆ ಒತ್ತಾಯಿಸಿವೆ.
2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿದೆ ಎಂದು ಬಿಜೆಪಿ ಪಕ್ಷ ಹಲವು ಬಾರಿ ಪ್ರಸ್ತಾಪಿಸಿದೆ. ಆದರೆ, ಇದೀಗ, 2ಜಿ ಹಗರಣದಲ್ಲಿ ಚಿದಂಬರಂ ಪಾತ್ರವಿರುವುದು ಅವರ ಪಕ್ಷದ ಸಚಿವರಿಂದಲೇ ಬಹಿರಂಗವಾಗಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ವ್ಯಂಗ್ಯವಾಡಿದ್ದಾರೆ.
ಅಂದಿನ ವಿತ್ತಸಚಿವ ಪಿ.ಚಿದಂಬರಂ ಒಂದು ವೇಳೆ ತಮ್ಮ ನಿಲುವಿಗೆ ಬದ್ಧರಾಗಿ 2ಜಿ ತರಂಗ ಗುಚ್ಚ ಲೈಸೆನ್ಸ್ಗಳನ್ನು ಹರಾಜುಗೊಳಿಸಿದ್ದಲ್ಲಿ, ಇಂತಹ ಹಗರಣ ಹೊರಬರುತ್ತಿರಲಿಲ್ಲ ಎಂದು ವಿತ್ತಸಚಿವಾಲಯ ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿದ ವರದಿ, 2ಜಿ ಹಗರಣಕ್ಕೆ ಹೊಸ ತಿರುವು ನೀಡಿದೆ.