ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸತತ ನಾಲ್ಕನೇ ಬಾರಿ ಮುಂಗಡ ಪತ್ರ ಮಂಡಿಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ವಿಧಾನಮಂಡಲದಲ್ಲಿ 2009-10ರ ಸಾಲಿನ ರಾಜ್ಯ ಬಜೆಟ್ ಅನ್ನು ಶುಕ್ರವಾರ ಮಧ್ನಾಹ್ನ 12.30ಕ್ಕೆ ಮಂಡಿಸುತ್ತಾ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ವಿದ್ಯುತ್ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಸಗೊಬ್ಬರ ಕೊರತೆ ಸರ್ಕಾರಕ್ಕೆ ಎದುರಾದ ಮೊದಲ ಸವಾಲು ಎಂದ ಅವರು ಇವೆಲ್ಲ ಸಮಸ್ಯೆಗಳ ನಡುವೆಯೂ ಸ್ಥಿರತೆ ಮತ್ತು ಅಭಿವೃದ್ದಿಯನ್ನು ಕಾಯ್ದುಕೊಂಡಿದ್ದು, ರೈತರ ಹಿತಕ್ಕೆ ಬದ್ದರಾಗಿರುವುದಾಗಿ ಹೇಳಿದರು.ಬಜೆಟ್ ಮುಖ್ಯಾಂಶ:ಜಾಗತಿಕ ಆರ್ಥಿಕ ಕುಸಿತದಿಂದ ರಾಜ್ಯಕ್ಕೂ ಸಂಕಷ್ಟ ಎದುರಾಗಿದೆ.ಅಭಿವೃದ್ದಿ ಯೋಜನೆಗಳಿಗೆ ಒತ್ತುಸೇವಾ ಕ್ಷೇತ್ರದ ಬೆಳವಣಿಗೆ ಶೇ.9.3ಕ್ಕೆ ಇಳಿಕೆಉದ್ಯಮ ವಲಯದ ರಫ್ತು ಉತ್ಪನ್ನಗಳಿಗೆ ಬೇಡಿಕೆ ಕಡಿಮೆಕೃಷಿ ಕ್ಷೇತ್ರದ ಉತ್ಪನ್ನ ಬೆಳವಣಿಗೆ ಶೇ.6ಕ್ಕೆ ಇಳಿಕೆ ಸಾಧ್ಯತೆಮಾಹಿತಿ ತಂತ್ರಜ್ಞಾನ, ಜವಳಿ ಕ್ಷೇತ್ರಗಳಲ್ಲಿ ಬೇಡಿಕೆ ಕುಸಿತತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟ ತಲುಪಿಲ್ಲವಿತ್ತೀಯ ಕೊರತೆ ನಿಯಂತ್ರಣಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ಗೆ ಹಿನ್ನೆಡೆ, ತೆರಿಗೆ ಸಂಗ್ರಹ ಕುಸಿತಯೋಜನಾ ವೆಚ್ಚದ ಅನುದಾನ ಹೆಚ್ಚಳಕ್ಕಾಗಿ ಕೇಂದ್ರಕ್ಕೆ ಮನವಿ29,500 ಕೋಟಿ ರೂಪಾಯಿ ಯೋಜನಾ ಗಾತ್ರರೈತರ ವಿದ್ಯುತ್ ಸರಬರಾಜಿಗೆ 2100ಕೋಟಿಪ್ರತಿ ತಾಲೂಕಿನಲ್ಲೂ ಗೋ ಶಾಲೆ ಆರಂಭಪ್ರತಿ ಗೋಶಾಲೆಗೆ 10ಲಕ್ಷ ರೂ.ಅನುದಾನಮೀನುಗಾರರ ಸ್ವಸಹಾಯ ಗುಂಪುಗಳಿಗೆ 10 ಕೋಟಿ ರೂ.ಶಿಕ್ಷಣ ಕ್ಷೇತ್ರಕ್ಕೆ 8,880 ಕೋಟಿ ವಿದ್ಯುತ್ ವಲಯದ ಯೋಜನೆಗೆ 6,107 ಕೋಟಿ ರೂ.ನೀರಾವರಿಗೆ 4,714 ಕೋಟಿ ರೂ.ಶೇ.3ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ವಿಸ್ತರಣೆಬೆಂಗಳೂರು ಸೇರಿ ನಗರಾಭಿವೃದ್ದಿಗೆ 7,376ಕೋಟಿಕೃಷಿ ಅಭಿವೃದ್ದಿಗೆ 2,440 ಕೋಟಿ ರೂ.ಸಾವಯವ ಕೃಷಿಗೆ 100 ಕೋಟಿ ರೂ. ಅನುದಾನಕೋಲಾರಕ್ಕೆ ತೋಟಗಾರಿಕಾ ಕಾಲೇಜು ಮಂಜೂರುಬೆಂಬಲ ಬೆಲೆ ಒದಗಿಸಲು 750ಕೋಟಿ ರೂ.ಮೀಸಲುಉದ್ಯೋಗ ಮೇಳದಿಂದ 13ಸಾವಿರ ನಿರುದ್ಯೋಗಳಿಗೆ ಪ್ರಯೋಜನಈ ಸಾಲಿನಲ್ಲಿ ಸಾವಿರ ರೈತರಿಗೆ ವಿದೇಶ ಪ್ರವಾಸಗ್ರಾಮೀಣಾಭಿವೃದ್ದಿಗೆ 3063 ಕೋಟಿ ರೂ.ಮಲೆನಾಡಿನಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ 25ಕೋಟಿ ರೂ.ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯಚಾಮರಾಜನಗರದಲ್ಲಿ ಶೈತ್ಯಾಗಾರಕ್ಕೆ 10 ಕೋಟಿ ರೂ.ಗದಗದ ಪಶು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 5ಕೋಟಿ ರೂ. |