ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಣುಕಾ ಸಚಿವಗಿರಿ 32 ದಿನ ಮಾತ್ರ: ನರ್ಸ್ ಭವಿಷ್ಯ! (Renukacharya | Jayalaxmi | BJP | Yeddyurappa)
Bookmark and Share Feedback Print
 
ಪರ-ವಿರೋಧದ ನಡುವೆಯೇ ಸಚಿವ ಪಟ್ಟಕ್ಕೆ ಏರಿರುವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಮಾಜಿ ಪ್ರೇಯಸಿ ನರ್ಸ್ ಜಯಲಕ್ಷ್ಮಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ ಇದೊಂದು ಶೇಮ್ ಎಂಬುದಾಗಿಯೂ ತಿರುಗೇಟು ನೀಡಿದ್ದಾರೆ!

ಅಲ್ಲದೆ, ರೇಣುಕಾಚಾರ್ಯ ಅವರು 32 ದಿನಕ್ಕಿಂತ ಹೆಚ್ಚು ದಿನಗಳ ಕಾಲ ಸಚಿವರಾಗಿ ಉಳಿಯುವುದಿಲ್ಲ ಎಂಬುದಾಗಿಯೂ ಜಯಲಕ್ಷ್ಮಿ ಭವಿಷ್ಯ ನುಡಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರೇಣುಕಾಚಾರ್ಯರ ಗುಣ ಏನೆಂಬುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಅವರ ವಿರುದ್ಧ ಕ್ರಮಿನಲ್ ಪ್ರಕರಣವೂ ಇದೆ. ಆರ್ಎಸ್ಎಸ್ ಪದದ ಅರ್ಥವೂ ತಿಳಿಯದ ಇಂಥ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡುತ್ತಿರುವುದು ಶೇಮ್ ಎಂದು ಜಯಲಕ್ಷ್ಮಿ ಛೇಡಿಸಿದರು.

ರೇಣುಕಾಚಾರ್ಯ ಸಚಿವರಾಗುವುದಕ್ಕೆ ಬಿಜೆಪಿಯ ಹಲವು ಶಾಸಕರ ವಿರೋಧವಿದೆ. ಹೀಗಿರುವಾಗ ಅವರು ಹೆಚ್ಚು ದಿನಗಳ ಕಾಲ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಗುರುವಾರ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ