ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ವಿರುದ್ಧ ಎಚ್‌ಡಿಕೆ ಭಾಷೆ ಸರಿಯಲ್ಲ: ಈಶ್ವರಪ್ಪ (Yeddyurappa | BJP | Ishwarappa | Kumaraswamy | JDS)
Bookmark and Share Feedback Print
 
ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳಸುತ್ತಿರುವ ಭಾಷೆ ಸರಿಯಿಲ್ಲ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.

ರಾಜ್ಯ ಛಲವಾದಿ ಮಹಾಸಭಾ ಭಾನುವಾರ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಆಡಳಿತದಲ್ಲಿ ತಪ್ಪು ಮಾಡಿದ ಸಂದರ್ಭ ವಿರೋಧ ಪಕ್ಷದವರು ಅದನ್ನು ಟೀಕಿಸಿದರೆ ನಾವು ಕೂಡ ಸ್ವಾಗತಿಸುತ್ತೇವೆ. ಆದರೆ ಅನಾವಶ್ಯಕವಾಗಿ ಬಾಯಿಗೆ ಬಂದಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಮಾಡಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಿ ಮನಸ್ಸಿಗೆ ನೋವು ತರುವ ಉದ್ದೇಶ ತನಗಿಲ್ಲ ಎಂದು ಹೇಳಿದರು. ಆದರೆ ಅವರು ತಮ್ಮ ಅನುಭವದ ಶಕ್ತಿಯನ್ನು ವಿನಾಕಾರಣ ಟೀಕೆ ಮಾಡಿ ವ್ಯಯಿಸುವ ಬದಲು ಉತ್ತಮವಾದ ಸಲಹೆ ನೀಡಲಿ ಎಂದರು.

ಕಳೆದ 18-20ತಿಂಗಳ ಬಿಜೆಪಿ ಆಡಳಿತಾವಧಿಯಲ್ಲಿ ವಿರೋಧ ಪಕ್ಷಗಳು ವಿಧಾನಮಂಡಲ ಅಧಿವೇಶನದಲ್ಲಿ ವಿರೋಧಪಕ್ಷಗಳು ಸರ್ಕಾರದ ಆಡಳಿತದ ಬಗ್ಗೆ ಒಳ್ಳೆಯ ಸಲಹೆ ನೀಡಿಲ್ಲ. ಅಲ್ಲದೇ ಈ ಬಗ್ಗೆ ಚರ್ಚೆ ಕೂಡ ನಡೆಸಿಲ್ಲ ಎಂದು ಆಪಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ