ಭಾರತೀಯ ಜನತಾ ಪಕ್ಷ ಜಾತ್ಯತೀತ ಪರಿಕಲ್ಪನೆ ಹೊಂದಿರುವ ಪಕ್ಷವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಲಾಲ್ಭಾಗ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಕೋಮುವಾದಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ ವರ್ಣಮಯ ಗುಲಾಬಿಯಿಂದ ಐತಿಹಾಸಿಕ ಕುತುಬ್ ಮಿನಾರ್ ರಚಿಸಿರುವುದು, ಬಿಜೆಪಿ ಜಾತ್ಯತೀತ ಎಂಬುದಕ್ಕೆ ಉತ್ತಮ ನಿದರ್ಶನ ಎಂದು ಪ್ರತಿಪಾದಿಸಿದರು.
260 ಎಕರೆ ಜಮೀನಿನಲ್ಲಿ ಸುಂದರ ತೋಟ ನಿರ್ಮಿಸಲು ಹೈದರಾಲಿ ಕಾರಣ. ಕಾಲಾಂತರದಲ್ಲಿ ತೋಟಗಾರಿಕಾ ಇಲಾಖೆಯ ಪ್ರಥಮ ನಿರ್ದೇಶಕ ಮರಿಗೌಡ ಇದನ್ನು ಅಭಿವೃದ್ದಿಗೊಳಿಸಿದರು. ಇಲ್ಲಿಯವರೆಗೆ ಲಾಲ್ಭಾಗ್ನಲ್ಲಿ 119 ಪುಷ್ಪ ಪ್ರದರ್ಶನ ಏರ್ಪಡಿಸಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು