ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೇಳಿದ್ದನ್ ಬರೆದುಕೊಳ್ಳಿ ಇಲ್ಲಾಂದ್ರೆ ಎದ್ದೋಗಿ: ಕಟ್ಟಾ ನುಡಿ (Katta subramanya Naidu | BJP | Yeddyurappa | Congress)
Bookmark and Share Feedback Print
 
PTI
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಂದ ಇಕ್ಕಟ್ಟಿಗೆ ಸಿಲುಕಿದ ವಸತಿ ಮತ್ತು ಸಣ್ಣ ಕೈಗಾರಿಕೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಆಕ್ರೋಶಗೊಂಡು 'ನಮ್ಮ ಸಿದ್ಧತೆಗಳ ಕುರಿತು ನಿಮಗೆ ವಿವರ ನೀಡುವ ಅಗತ್ಯವಿಲ್ಲ. ನಾ ಹೇಳಿದ್ದನ್ನೇ ಬರೆದುಕೊಳ್ಳಿ..ಇಲ್ಲವಾದರೆ ಎದ್ದು ಹೋಗಿ' ಎಂದು ಮಾಧ್ಯಮದವರನ್ನು ಕೆರಳಿಸಿದ ಘಟನೆ ನಡೆದಿದೆ.

ನಂತರ, ಸುದ್ದಿಗೋಷ್ಠಿಯಿಂದ ಹೊರಬಂದ ಕೂಡಲೇ ಮಾಧ್ಯಮದವರನ್ನು ಸಂಪರ್ಕಿಸಿ 'ನೋಡಿ ನಾನು ಇರೋದೇ ಹಾಗೆ, ಇದಕ್ಕೆಲ್ಲ ಮಹತ್ವ ಕೊಟ್ಟು ಪ್ರಚಾರ ಮಾಡಬೇಡಿ; ಎಂದು ರಾಜಿಗೆ ಮುಂದಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವನ್ನು ಮುಂದಿನ 3 ವರ್ಷಗಳಲ್ಲಿ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದರು. ಕಡಿಮೆ ಬೆಲೆಗೆ ಬಡವರಿಗೆ ಮನೆ ಕಟ್ಟಿ ಕೊಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬಡವರ ಸಮೀಕ್ಷೆ ಮಾಡಿ 3ತಿಂಗಳೊಳಗೆ ಯೋಜನೆ ತಯಾರಿಸಿ ಎಲ್ಲರಿಗೂ ನಿವೇಶನ ಒದಗಿಸಲಾಗುವುದು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ