ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನತೆ ಮನೆ,ಮಠ ಕಳೆದುಕೊಂಡು ಸಂಕಷ್ಟದಲ್ಲಿರುವಾಗ, ಹಂಪಿಯಲ್ಲಿ ಕೋಟ್ಯಂತರ ರೂ.ವ್ಯಯಿಸಿ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ಉತ್ಸವ ಆಚರಿಸುತ್ತಿರುವುದಕ್ಕೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಉತ್ತರ ಕರ್ನಾಟಕದ ಜನತೆ ನೆರೆಯಿಂದ ಮನೆ, ಜಮೀನು ಕಳೆದುಕೊಂಡು ಯಾವುದೇ ಹಬ್ಬ ಆಚರಿಸದೆ ಇರುವ ಸಂದರ್ಭದಲ್ಲಿ ಹಂಪಿಯಲ್ಲಿ ಉತ್ಸವ ಆಚರಿಸುವ ಅಗತ್ಯವಿದೆಯೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ನೆರೆ ಪೀಡಿತರಿಗೆ ಪರಿಹಾರ ವಿತರಿಸುವ ಬಗ್ಗೆ ಹಣದ ಕೊರತೆ ಇದೆ ಎಂದು ಹೇಳುವ ಸರ್ಕಾರ ಸುಮಾರು 40ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷ್ಣದೇವರಾಯ ಉತ್ಸವ ಆಚರಿಸುತ್ತಿರುವ ಅಗತ್ಯವೇನಿಲ್ಲ. ಈ ವರ್ಷದ ಬದಲು ಮುಂದಿನ ವರ್ಷ ಉತ್ಸವ ಆಚರಿಸಬಹುದಿತ್ತು ಎಂದರು.