ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿವಯಸ್ಸಿನಲ್ಲೂ ರೈತರೊಂದಿಗೆ ಕುಳಿತು ಹೋರಾಟ ಮಾಡುತ್ತಾರೆಂದರೆ ನಿಜಕ್ಕೂ ಮೆಚ್ಚಬೇಕು ಎಂದು ಹೊಗಳಿದವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ.
ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪಶ್ಚಿಮಬಂಗಾಳ ಮಾಜಿ ಸಿಎಂ ಜ್ಯೋತಿ ಬಸು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಇಳಿವಯಸ್ಸಿನಲ್ಲೂ ಜನಪರ ಹೋರಾಟ ಮಾಡುವ ದೇವೇಗೌಡರಿಗೆ ಅವರೇ ಸಾಟಿ ಎಂದು ಬಣ್ಣಿಸಿದರು.
ಮಾಜಿ ಪ್ರಧಾನಿಯಾಗಿ ರೈತರ ಪರ ಧ್ವನಿ ಎತ್ತುತ್ತಿರುವ ಅವರ ಕಾಳಜಿಯನ್ನು ಮೆಚ್ಚಬೇಕೇ ಹೊರತು, ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತನಗೆ ಮುಖ್ಯವಾದ ಕೆಲಸವಿದೆ ಎಂದು ಹೇಳಿ ಗೌಡರು ಸಭೆಯಿಂದ ಅರ್ಧಕ್ಕೆ ಹೊರ ನಡೆಯುತ್ತಿದ್ದಾಗ ಎಲ್ಲಿಗೆ ಎಂದು ಕೇಳಿದೆ. ಆಗ ನೈಸ್ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಎಂದರು. ಈ ವಯಸ್ಸಲ್ಲೂ ಹೋರಾಟ ಮಾಡುವ ಅವರ ಛಲ ಶ್ಲಾಘನೀಯವಾದದ್ದು ಎಂದು ಬಂಗಾರಪ್ಪ ಹೇಳಿದರು.