ಶ್ರೀಕೃಷ್ಣದೇವರಾಯ ಉತ್ಸವ ದುಂದು ವೆಚ್ಚಕ್ಕಲ್ಲ: ಯಡಿಯೂರಪ್ಪ
ಬೆಂಗಳೂರು, ಬುಧವಾರ, 27 ಜನವರಿ 2010( 13:15 IST )
ಶ್ರೀಕೃಷ್ಣದೇವರಾಯ ಉತ್ಸವ ನಡೆಸುತ್ತಿರುವುದು ದುಂದು ವೆಚ್ಚಕ್ಕಲ್ಲ. ವಿಜಯನಗರದ ಅರಸರ ವೈಭವ ನೆನಪಿಸಿಕೊಳ್ಳಲು ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ರಾಜಭವನದಲ್ಲಿ ರಾಜ್ಯಪಾಲರು ಆಯೋಜಿಸಿದ್ದ ಚಹಾಕೂಟದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಇಂದಿನ ಪೀಳಿಗೆಗೆ ಗತಕಾಲದ ನೆನಪು ಮಾಡಿ ಕೊಡುವ ಉದ್ದೇಶ ಹಂಪಿ ಉತ್ಸವದಲ್ಲಿದೆ. ಸಮಾರಂಭದ ಬಳಿಕ ಖರ್ಚು ಮಾಡಿದ ಪೈಸೆ ಪೈಸೆಯ ಲೆಕ್ಕವನ್ನು ಕೊಡಲಾಗುವುದು ಎಂದರು.
ಜನವರಿ 28ರೊಳಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರು ಯಾರು ಎಂಬ ಚಿತ್ರಣ ದೊರಕಲಿದೆ. ಅಂದು ಈ ಆಯ್ಕೆಗೆ ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.